ಯೋಗೇಶ್ ರಾಜ್ 
ದೇಶ

ಬುಲಂದ್ ಶಹರ್ ಪೋಲೀಸ್ ಹತ್ಯೆ: 'ಎ ಒನ್' ಆರೋಪಿ ಯೋಗೇಶ್ ರಾಜ್ ಬಂಧನ

ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ ಎ ಒನ್ ಆರೋಪಿಯನ್ನು ಬಂಧಿಸಲಾಗಿದೆ.

ಲಖನೌ: ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೋಲೀಸ್ ಅಧಿಕಾರಿ ಹತ್ಯೆ ಪ್ರಕರಣ ಸಂಬಂಧ 'ಎ ಒನ್' ಆರೋಪಿಯನ್ನು ಬಂಧಿಸಲಾಗಿದೆ.
ಬಜರಂಗದಳ ನಾಯಕರೇ ತಲೆಮರೆಸಿಕೊಂಡಿದ್ದ ಆರೋ ಯೋಗೇಶ್ ರಾಜ್ ನನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾರೆ.
ಡಿಸೆಂಬರ್ ನಲ್ಲಿ ನಡೆದಿದ್ದ ಬುಲಂದ್ ಶಹರ್ ಗುಂಪು ಘರ್ಷಣೆಯಲ್ಲಿ ಹಾಡಹಗಲೇ ಪೋಲೀಸ್ ಅಧಿಕಾರಿ ಹತ್ಯೆ ನಡೆದಿದ್ದು ದೇಶಕ್ಕೆ ದೇಶವೇ ಬೆಚ್ಚಿ ಬೀಳುವಂತಾಗಿತ್ತು. ಈ ಹತ್ಯೆ ಬಳಿಕ ಯೋಗೇಶ್ ರಾಜ್ ರಹಸ್ಯ ಸ್ಥಳದಲ್ಲಿದ್ದುಕೊಂಡು ವೀಡಿಯೋ ಹರಿಯಬಿಟ್ಟಿದ್ದನು. ಕಾಡಿನ ನಡುವೆ ಹಸುವಿನ ಕಳೇಬರ ಪತ್ತೆಯಾದ ಬಳಿಕ ಸ್ಥಳೀಯ ಗುಂಪಿಗೆ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವ ಆರೋಪ ಯೋಗೇಶ್ ಮೇಲಿದೆ. ಘರ್ಷಣೆಗೆ ಮುನ್ನವೇ ಈತ ಪೋಲೀಸರಿಗೆ ಗೋಹತ್ಯೆ ಕುರಿತು ದೂರು ಸಲ್ಲಿಸಿದ್ದು ಆ ವೇಳೆ ಹತ್ತು ಮಂದಿ ಆರೋಪಿಗಳ ಹೆಸರು ಸೂಚಿಸಿದ್ದನೆನ್ನಲಾಗಿದೆ.
ಡಿಸೆಂಬರ್ 3ರಂದು ನಡೆದ ಘಟನೆಯಲ್ಲಿ ಪೋಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಗುರಿಯಾಗಿಸಿಕೊಂಡು ಸುಮಾರು ನಾಲ್ಕು ನೂರಕ್ಕೆ ಹೆಚ್ಚಿನ ಜನರ ಗುಂಪು ದಾಳಿ ಮಾಡಿತ್ತು. ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ ಗುಂಪು ಪೋಲೀಸ್ ಅಧಿಕಾರಿ ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿ ಹತ್ಯೆಗೈಯ್ದಿತ್ತು. ಈ ವೇಳೆ ಸಂಭವಿಸಿದ್ದ ಹಿಂಸಾಚಾರದಲ್ಲಿ ಓರ್ವ ಯುವಕ ಸಹ ಸಾವನ್ನಪಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್ 10 ವರ್ಷದಲ್ಲಿ 50 ಸಾವಿರ ಶೌಚಾಲಯ ಕಟ್ಟಲಿಲ್ಲ, ನಾವು 50 ಸಾವಿರ ರೈಲು ಕೋಚ್ ನಿರ್ಮಿಸಿದೆವು: ಪ್ರಧಾನಿ ಮೋದಿ

ತಮಿಳುನಾಡು ವಿಧಾನಸಭೆಯಲ್ಲಿ ಭಾರೀ ಹೈಡ್ರಾಮಾ: ಸಿಎಂ ಜೋಸೆಫ್ ವಿಜಯ್ ಆರೋಪಕ್ಕೆ DMK ಆಕ್ರೋಶ, ಸದನದಿಂದ ಶಾಸಕರು ಹೊರಕ್ಕೆ..!

ಯಶವಂತಪುರ APMCಗೆ ಸಿಎಂ ದಿಢೀರ್ ಭೇಟಿ: ರೈತರ ಅಹವಾಲು ಆಲಿಸಿದ ಡಿಕೆ ಶಿವಕುಮಾರ್, Video

'ಅವಮಾನಿಸಿ ಮೂಲೆಗುಂಪು ಮಾಡಿದರು, ಇನ್ನೂ ಸಾವಿರಾರು ಡಾಲರ್ ಹಣ ಕೊಡ್ಬೇಕು' 'ಅವನು ಇರೋವರ್ಗೂ ಪಾಕಿಸ್ತಾನ ಉದ್ದಾರ ಆಗಲ್ಲ'

‘ರೀಲ್ಸ್‌’ ಗೀಳು; ಇಂಟರ್‌ನೆಟ್‌ ಕೈಕೊಟ್ಟಿದ್ದಕ್ಕೆ ಬೇಸರ; ಮಹಿಳೆ ಆತ್ಮಹತ್ಯೆಗೆ ಶರಣು!