ಸಾಂದರ್ಭಿಕ ಚಿತ್ರ 
ದೇಶ

ದಿಢೀರ್ ಹರತಾಳ ನಡೆಸುವಂತಿಲ್ಲ, 7 ದಿನ ಮುಂಚೆ ನೋಟಿಸ್ ನೀಡಬೇಕು: ಕೇರಳ ಹೈಕೋರ್ಟ್

ಪದೇಪದೆ ಹರತಾಳ, ಪ್ರತಿಭಟನೆಯಿಂದ ತತ್ತರಿಸಿ ಹೋಗಿರುವ ದೇವರ ನಾಡು ಕೇರಳ ಜನತೆಗೆ ಹೈಕೋರ್ಟ್ ಸ್ವಲ್ಪ...

ತಿರುವನಂತಪುರಂ: ಪದೇಪದೆ ಹರತಾಳ, ಪ್ರತಿಭಟನೆಯಿಂದ ತತ್ತರಿಸಿ ಹೋಗಿರುವ ದೇವರ ನಾಡು ಕೇರಳ ಜನತೆಗೆ ಹೈಕೋರ್ಟ್ ಸ್ವಲ್ಪ ರಿಲೀಫ್ ನೀಡಿದ್ದು, ರಾಜ್ಯದಲ್ಲಿ ದಿಢೀರ್ ಹರತಾಳ ನಡೆಸುವುದನ್ನು ನಿಷೇಧಿಸಿ ಸೋಮವಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ಕೋರಿ ಕೇರಳ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಯಾವುದೇ ಸಂಘಟನೆಗಳು ಮತ್ತು ಪಕ್ಷಗಳು ದಿಢೀರ್ ಹರತಾಳಕ್ಕೆ ಕರೆ ನೀಡುವಂತಿಲ್ಲ. ಒಂದು ವೇಳೆ ಹರತಾಳ ನಡೆಸುವುದಾದರೆ ಕನಿಷ್ಠ ಏಳು ದಿನ ಮುಂಚಿತವಾಗಿಯೇ ನೋಟಿಸ್ ನೀಡಬೇಕು ಎಂದು ಆದೇಶಿಸಿದೆ.
ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿರೋಧಿಸಿ ಮತ್ತು ಕೆಲ ಮಹಿಳೆಯರು ದೇಗುಲ ಪ್ರವೇಶಿಸಿದ ಕಾರಣಕ್ಕೆ ರಾಜ್ಯದಲ್ಲಿ ಸರಣಿ ಹರತಾಳ ನಡೆಯುತ್ತಿದ್ದು, ಇದರಿಂದಾಗಿ 2018ರಲ್ಲಿ 97 ಕೆಲಸದ ದಿನಗಳು ನಷ್ಟವಾಗಿವೆ. ಹರತಾಳದಿಂದ ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಭಾರಿ ನಷ್ಟ ಅನುಭವಿಸಿದೆ. ಹೀಗಾಗಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ವಾಣಿಜ್ಯ ಮಂಡಳಿ ಮನವಿ ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT