ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ 
ದೇಶ

ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಶ್ವ ಹಿಂದೂ ಪರಿಷತ್ ೯ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ ತಮ್ಮ ನಿವಾಸದ...

ನವದೆಹಲಿ: ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ  ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ  ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ದಾಲ್ಮಿಯಾ 9.38ಕ್ಕೆ ದೆಹಲಿಯ  ಗಾಲ್ಫ್ ಲಿಂಕ್ಸ್ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ವಿಷ್ಣು ಹರಿ ದಾಲ್ಮಿಯಾ ಅವರು ಇಂದು ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.ಸಂಜೆ ನಿಗಂಬೋಡ್ ಘಾಟ್ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಎಚ್ ಪಿಹೇಳಿಕೆಯಲ್ಲಿ ತಿಳಿಸಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ದಾಲ್ಮಿಯಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆ ನಂತರ  ಜನವರಿ 13ರಂದು  ಮತ್ತೆ ಮನೆಗೆ ಹಿಂತಿರುಗಿದ್ದರು.
ದಾಲ್ಮಿಯಾ ಶ್ರೀ ರಾಮಜನ್ಮಭೂಮಿ ನಿವಾಸ್ ನ ಟ್ರಸ್ಟಿಯೂ, ವಿಎಚ್ ಪಿ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ನ ಸದಸ್ಯರೂ ಆಗಿದ್ದರು. ಹಿರಿಯ ವಿಎಚ್ಪಿ ಮುಖಂಡರಾದ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಅವರೊಂದಿಗೆ ರಾಮ್ ಜನ್ಮಭೂಮಿ ಆಂದೋಲನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ದಾಲ್ಮಿಯಾ ಕೂಡ ಒಬ್ಬರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT