ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ 
ದೇಶ

ಮಾಜಿ ವಿಎಚ್ ಪಿ ಮುಖ್ಯಸ್ಥ ವಿಷ್ಣು ಹರಿ ದಾಲ್ಮಿಯಾ ಇನ್ನಿಲ್ಲ

ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ವಿಶ್ವ ಹಿಂದೂ ಪರಿಷತ್ ೯ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ ತಮ್ಮ ನಿವಾಸದ...

ನವದೆಹಲಿ: ರಾಮ ಜನ್ಮಭೂಮಿ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ  ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮಾಜಿ ಅಧ್ಯಕ್ಷ ವಿಷ್ಣು ಹರಿ ದಾಲ್ಮಿಯಾ ಬುಧವಾರ  ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ಖ್ಯಾತ ಕೈಗಾರಿಕೋದ್ಯಮಿಯಾಗಿದ್ದ ದಾಲ್ಮಿಯಾ 9.38ಕ್ಕೆ ದೆಹಲಿಯ  ಗಾಲ್ಫ್ ಲಿಂಕ್ಸ್ ನಿವಾಸದಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ವಿಷ್ಣು ಹರಿ ದಾಲ್ಮಿಯಾ ಅವರು ಇಂದು ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.ಸಂಜೆ ನಿಗಂಬೋಡ್ ಘಾಟ್ ನಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ವಿಎಚ್ ಪಿಹೇಳಿಕೆಯಲ್ಲಿ ತಿಳಿಸಿದೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ದಾಲ್ಮಿಯಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು .ಆ ನಂತರ  ಜನವರಿ 13ರಂದು  ಮತ್ತೆ ಮನೆಗೆ ಹಿಂತಿರುಗಿದ್ದರು.
ದಾಲ್ಮಿಯಾ ಶ್ರೀ ರಾಮಜನ್ಮಭೂಮಿ ನಿವಾಸ್ ನ ಟ್ರಸ್ಟಿಯೂ, ವಿಎಚ್ ಪಿ ಕೇಂದ್ರೀಯ ಮಾರ್ಗದರ್ಶಕ್ ಮಂಡಲ್ ನ ಸದಸ್ಯರೂ ಆಗಿದ್ದರು. ಹಿರಿಯ ವಿಎಚ್ಪಿ ಮುಖಂಡರಾದ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಅವರೊಂದಿಗೆ ರಾಮ್ ಜನ್ಮಭೂಮಿ ಆಂದೋಲನದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ದಾಲ್ಮಿಯಾ ಕೂಡ ಒಬ್ಬರಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

US-Iran Peace Talks: ಇಸ್ಲಾಮಾಬಾದ್‌ನಲ್ಲಿ 21 ಗಂಟೆ ಮಾತುಕತೆಯಾದ್ರು, ಯುಎಸ್- ಇರಾನ್ ಶಾಂತಿ ಒಪ್ಪಂದ ವಿಫಲ! ಕಾರಣಗಳೇನು?

'ಇರಾನ್ ನಮಗೆ ಬೆದರಿಕೆಯೊಡ್ಡಿತ್ತು, ಆದರೆ ಈಗ ಬದುಕುಳಿಯಲು ಹೋರಾಡುತ್ತಿದೆ': ಶಾಂತಿ ಮಾತುಕತೆ ವಿಫಲದ ಬಳಿಕ ಇಸ್ರೇಲ್!

SCROLL FOR NEXT