ದೇಶ

ದೇಶದ್ರೋಹ ಕಾನೂನನ್ನು ರದ್ದುಪಡಿಸಿ, ಅದೊಂದು ವಸಾಹತುಶಾಹಿ ಮನಸ್ಥಿತಿ: ಸಿಬಲ್

Srinivas Rao BV
ನವದೆಹಲಿ: ದೇಶದ್ರೋಹದ ಕಾನೂನನ್ನು ರದ್ದುಪಡಿಸಬೇಕೆಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಗ್ರಹಿಸಿದ್ದಾರೆ. 
ದೇಶದ್ರೋಹದ ಕಾನೂನನ್ನು ವಸಾಹತುಶಾಹಿ ಮನಸ್ಥಿತಿ ಎಂದು ಹೇಳಿರುವ ಕಪಿಲ್ ಸಿಬಲ್, ಅಧಿಕಾರದಲ್ಲಿರುವವರು ಅದನ್ನು ತಿರುಚುತ್ತಿದ್ದಾರೆ. ದೇಶವನ್ನು ರಕ್ಷಿಸುವುದಕ್ಕಾಗಿ ಸರ್ಕಾರವನ್ನು ಬದಲಾವಣೆ ಮಾಡಿ ಎಂದು ಸಿಬಲ್ ಜನತೆಗೆ ಕರೆ ನೀಡಿದ್ದಾರೆ.
ಅಧಿಕಾರದಲ್ಲಿರುವವರು ಸಂಸ್ಥೆಗಳನ್ನು ತಿರುಚಿದರೆ, ಕಾನೂನನ್ನು ದುರುಪಯೋಗಪಡಿಸಿಕೊಂಡರೆ ಅದು ನಿಜವಾದ ದೇಶದ್ರೋಹ, ಅಂತಹವರನ್ನು 2019 ರಲ್ಲಿ ಶಿಕ್ಷಿಸಿ, ಸರ್ಕಾರವನ್ನು ಬದಲಿಸಿ ದೇಶವನ್ನು ಉಳಿಸಿ ಎಂದು ಕಪಿಲ್ ಸಿಬಲ್ ಟ್ವಿಟರ್ ನಲ್ಲಿ ಬರೆದಿದ್ದಾರೆ. 
SCROLL FOR NEXT