ಗುವಾಹಟಿಯಲ್ಲಿ ನಡೆದ ಸ್ಫೋಟದ ದೃಶ್ಯ(ಸಂಗ್ರಹ ಚಿತ್ರ) 
ದೇಶ

2008 ಅಸ್ಸಾಂ ಸ್ಫೋಟ ಪ್ರಕರಣ: ಎನ್ ಡಿಎಫ್ ಬಿ ನಾಯಕ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾ...

ಗುವಾಹಟಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಬಣ(ಎನ್ ಡಿಎಫ್ ಬಿ)ದ ಮುಖ್ಯಸ್ಥ ರಂಜನ್ ದೈಮರಿ ಮತ್ತು ಇತರ 9 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಂದು ಅಂತಿಮ ತೀರ್ಪಿನ ವಿಚಾರಣೆಯಿದ್ದುದರಿಂದ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರಕರಣದ ಆರೋಪಿಗಳಾದ ರಂಜನ್ ದೈಮರಿ, ಜಾರ್ಜ್ ಬೊಡೊ, ಬಿ ತರೈ, ರಾಜು ಸರ್ಕಾರ್, ಅಂಚೈ ಬೊಡೊ, ಇಂದ್ರ ಬ್ರಹ್ಮ, ಲೊಕೊ ಬಾಸುಮತರಿ, ಖರ್ಗೇಶ್ವರ ಬಸುಮತಲಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೊಯರಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಇತರ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರ ಬ್ರಹ್ಮ ಅವರಿಗೆ ದಂಡ ವಿಧಿಸಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಲಿದೆ.
ಈಗಾಗಲೇ ಶಿಕ್ಷೆಯ ಅವಧಿ ಪೂರ್ಣಗೊಳಿಸಿರುವ ನಿಲಿಮ್ ಡೈಮರಿ ಮತ್ತು ಮೃದುಲ್ ಗೊಯರಿ ಅವರನ್ನು ಬಿಡುಗಡೆ ಮಾಡುವಂತೆ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ.

ಕಳೆದ ಸೋಮವಾರ ಡೈಮರಿ ಮತ್ತು ಇತರ 14 ಮಂದಿ ಆರೋಪಿಗಳೆಂದು ತೀರ್ಮಾನಿಸಲಾಗಿತ್ತು. 2008ರ ಅಕ್ಟೋಬರ್ 30ರಂದು ಎನ್ ಡಿಎಫ್ ಬಿ ಗುವಾಹಟಿ, ಕೊಕ್ರಜ್ಹರ್ ಗಳಲ್ಲಿ ತಲಾ 3, ಬರ್ಪೆಟಾ ಮತ್ತು ಬೊಂಗೈಗೌನ್ ನಲ್ಲಿ ತಲಾ ಒಂದೊಂದು ಬಾಂಬ್ ಗಳನ್ನು ಇರಿಸಲಾಗಿತ್ತು. ಘಟನೆಯಲ್ಲಿ 88 ಮಂದಿ ಮೃತಪಟ್ಟು 540 ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel