ಗುವಾಹಟಿಯಲ್ಲಿ ನಡೆದ ಸ್ಫೋಟದ ದೃಶ್ಯ(ಸಂಗ್ರಹ ಚಿತ್ರ) 
ದೇಶ

2008 ಅಸ್ಸಾಂ ಸ್ಫೋಟ ಪ್ರಕರಣ: ಎನ್ ಡಿಎಫ್ ಬಿ ನಾಯಕ ಸೇರಿ 10 ಮಂದಿಗೆ ಜೀವಾವಧಿ ಶಿಕ್ಷೆ ಪ್ರಕಟ

2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾ...

ಗುವಾಹಟಿ: 2008ರ ಅಸ್ಸಾಂ ಸರಣಿ ಸ್ಫೋಟ ಪ್ರಕರಣದ ಆರೋಪಿಗಳಾದ ಬೊಡೊಲ್ಯಾಂಡ್ ನ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಬಣ(ಎನ್ ಡಿಎಫ್ ಬಿ)ದ ಮುಖ್ಯಸ್ಥ ರಂಜನ್ ದೈಮರಿ ಮತ್ತು ಇತರ 9 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಇಂದು ಅಂತಿಮ ತೀರ್ಪಿನ ವಿಚಾರಣೆಯಿದ್ದುದರಿಂದ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಪ್ರಕರಣದ ಆರೋಪಿಗಳಾದ ರಂಜನ್ ದೈಮರಿ, ಜಾರ್ಜ್ ಬೊಡೊ, ಬಿ ತರೈ, ರಾಜು ಸರ್ಕಾರ್, ಅಂಚೈ ಬೊಡೊ, ಇಂದ್ರ ಬ್ರಹ್ಮ, ಲೊಕೊ ಬಾಸುಮತರಿ, ಖರ್ಗೇಶ್ವರ ಬಸುಮತಲಿ, ಅಜಯ್ ಬಸುಮತರಿ ಮತ್ತು ರಾಜೇನ್ ಗೊಯರಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಧೀಶ ಅಪರೇಶ್ ಚಕ್ರವರ್ತಿ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ಇತರ ಮೂವರು ಆರೋಪಿಗಳಾದ ಪ್ರಭಾತ್ ಬೊಡೊ, ಜಯಂತಿ ಬಸುಮತರಿ ಮತ್ತು ಮಥುರ ಬ್ರಹ್ಮ ಅವರಿಗೆ ದಂಡ ವಿಧಿಸಿ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಲಿದೆ.
ಈಗಾಗಲೇ ಶಿಕ್ಷೆಯ ಅವಧಿ ಪೂರ್ಣಗೊಳಿಸಿರುವ ನಿಲಿಮ್ ಡೈಮರಿ ಮತ್ತು ಮೃದುಲ್ ಗೊಯರಿ ಅವರನ್ನು ಬಿಡುಗಡೆ ಮಾಡುವಂತೆ ಸಿಬಿಐ ನ್ಯಾಯಾಲಯ ಆದೇಶ ನೀಡಿದೆ.

ಕಳೆದ ಸೋಮವಾರ ಡೈಮರಿ ಮತ್ತು ಇತರ 14 ಮಂದಿ ಆರೋಪಿಗಳೆಂದು ತೀರ್ಮಾನಿಸಲಾಗಿತ್ತು. 2008ರ ಅಕ್ಟೋಬರ್ 30ರಂದು ಎನ್ ಡಿಎಫ್ ಬಿ ಗುವಾಹಟಿ, ಕೊಕ್ರಜ್ಹರ್ ಗಳಲ್ಲಿ ತಲಾ 3, ಬರ್ಪೆಟಾ ಮತ್ತು ಬೊಂಗೈಗೌನ್ ನಲ್ಲಿ ತಲಾ ಒಂದೊಂದು ಬಾಂಬ್ ಗಳನ್ನು ಇರಿಸಲಾಗಿತ್ತು. ಘಟನೆಯಲ್ಲಿ 88 ಮಂದಿ ಮೃತಪಟ್ಟು 540 ಮಂದಿ ಗಾಯಗೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT