ನರೇಂದ್ರ ಮೋದಿ-ರಾಹುಲ್ ಗಾಂಧಿ 
ದೇಶ

ಟೈಮ್ಸ್ ನೌ, ವಿಎಂಆರ್‌ನಿಂದ 'ಲೋಕ' ಚುನಾವಣಾ ಪೂರ್ವ ಸಮೀಕ್ಷೆ; ಮೋದಿಗೆ ಹಿನ್ನಡೆ, ಯಾರಾಗ್ತಾರೆ ಪ್ರಧಾನಿ?

2019ರ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು ಇನ್ನು ಕೆಲವೊಂದು ಮಾಧ್ಯಮಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು ರಾಷ್ಟ್ರೀಯ...

ನವದೆಹಲಿ: 2019ರ ಲೋಕಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇದ್ದು ಇನ್ನು ಕೆಲವೊಂದು ಮಾಧ್ಯಮಗಳು ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿದ್ದು ರಾಷ್ಟ್ರೀಯ ಪಕ್ಷಗಳ ಆತಂಕಕ್ಕೆ ಕಾರಣವಾಗಿದೆ. ಈ ಬಾರಿ ಪ್ರಧಾನಿ ಮೋದಿಗೆ ಪ್ರಾದೇಶಿಕ ಪಕ್ಷಗಳು ದೊಡ್ಡ ಪೈಪೋಟಿ ನೀಡಲಿವೆ.
ಸದ್ಯ ವಿಎಂಆರ್ ಮತ್ತು ಟೈಮ್ಸ್ ನೌ ಸೇರಿ ರಾಜ್ಯವಾರು ನಡೆಸಿರುವ ಈ ಸಮೀಕ್ಷೆ ಯಾವ ಪಕ್ಷ ಎಷ್ಟು ಸ್ಥಾನ ಗಳಿಸಲಿವೆ ಎಂಬುದನ್ನು ತಿಳಿಸಿದೆ. 
ರಾಜ್ಯಗಳ ಸಮೀಕ್ಷಾ ವಿವರ ಹೀಗಿದೆ:
ಕರ್ನಾಟಕ: 28 ಕ್ಷೇತ್ರಗಳ ಪೈಕಿ ಬಿಜೆಪಿ 14, ಕಾಂಗ್ರೆಸ್ 14 ಸ್ಥಾನ ಗೆಲ್ಲಲಿದೆ. 
ಆಂಧ್ರಪ್ರದೇಶ: 25 ಕ್ಷೇತ್ರಗಳ ಪೈಕಿ ವೈಆರ್ಎಸ್ ಕಾಂಗ್ರೆಸ್ 23, ಟಿಡಿಪಿಗೆ 2 ಸ್ಥಾನ.
ತಮಿಳುನಾಡು: 39 ಕ್ಷೇತ್ರಗಳ ಪೈಕಿ ಯುಪಿಎ ಡಿಎಂಕೆ 35, ಎಐಎಡಿಎಂಕೆ 4 
ಕೇರಳ: 20 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ 16
ತೆಲಂಗಾಣ: 17 ಕ್ಷೇತ್ರಗಳ ಪೈಕಿ ಟಿಆರ್ಎಸ್ 10, ಕಾಂಗ್ರೆಸ್ 5 ಹಾಗೂ ಬಿಜೆಪಿ 1 ಸ್ಥಾನ.
ಪಾಂಡಿಚೇರಿ: 1 ಸಂಸದೀಯ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು.
ಅಂಡಮಾನ್: 1 ಸಂಸದೀಯ ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಬಿಹಾರ: 40 ಕ್ಷೇತ್ರಗಳ ಪೈಕಿ ಎನ್ಡಿಎ 25, ಯುಪಿಎ 15 ಕ್ಷೇತ್ರ.
ಪಶ್ಚಿಮ ಬಂಗಾಳ: 42 ಕ್ಷೇತ್ರಗಳ ಪೈಕಿ ತೃಣಮೂಲ ಕಾಂಗ್ರೆಸ್ 32, ಬಿಜೆಪಿ 9 ಹಾಗೂ ಇತರೆ 1 ಸ್ಥಾನ.
ಜಾರ್ಖಂಡ್: 14 ಕ್ಷೇತ್ರ- ಕಾಂಗ್ರೆಸ್ 8, ಬಿಜೆಪಿ 6 ಕ್ಷೇತ್ರ. 
ಒಡಿಶಾ: 21 ಕ್ಷೇತ್ರಗಳಲ್ಲಿ ಬಿಜೆಪಿ 13, ಬಿಜೆಪಿ 8 ಕ್ಷೇತ್ರ.
ಅಸ್ಸಾಂ: 14 ಕ್ಷೇತ್ರಗಳಲ್ಲಿ ಬಿಜೆಪಿ 8, ಕಾಂಗ್ರೆಸ್ 3 ಹಾಗೂ ಇತರರು 3 ಕ್ಷೇತ್ರ.
ನಾರ್ಥ್ ಈಸ್ಟ್: 11 ಕ್ಷೇತ್ರದಲ್ಲಿ ಬಿಜೆಪಿ 9 ಸ್ಥಾನ. ಇತರರು 2 ಸ್ಥಾನ. 
ಮಹಾರಾಷ್ಟ್ರ: 48 ಕ್ಷೇತ್ರಗಳಲ್ಲಿ ಎನ್ಡಿಎ 43 ಕ್ಷೇತ್ರ. ಯುಪಿಎ 5 ಕ್ಷೇತ್ರ.
ಗುಜರಾತ್: 26 ಕ್ಷೇತ್ರಗಳಲ್ಲಿ ಬಿಜೆಪಿ 24 ಹಾಗೂ ಕಾಂಗ್ರೆಸ್ 2 ಕ್ಷೇತ್ರ.
ಗೋವಾ: 2 ಕ್ಷೇತ್ರಗಳಲ್ಲಿ ಬಿಜೆಪಿ 1, ಕಾಂಗ್ರೆಸ್ 1 ಕ್ಷೇತ್ರ.
ದಮನ್ ಮತ್ತು ಡಿಯು: 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಉತ್ತರಪ್ರದೇಶ: 80 ಕ್ಷೇತ್ರಗಳ ಪೈಕಿ ಎನ್ಡಿಎ 27, ಎಸ್ಬಿ-ಬಿಎಸ್ಪಿ 51 ಹಾಗೂ ಕಾಂಗ್ರೆಸ್ 2 ಕ್ಷೇತ್ರ.
ದಾದ್ರಾ ನಗರ ಹವೆಲಿ: 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು.
ಮಧ್ಯಪ್ರದೇಶ: 29 ಕ್ಷೇತ್ರಗಳ ಪೈಕಿ ಬಿಜೆಪಿ 23 ಹಾಗೂ ಕಾಂಗ್ರೆಸ್ 6 ಕ್ಷೇತ್ರ.
ರಾಜಸ್ಥಾನ: 25 ಕ್ಷೇತ್ರಗಳ ಪೈಕಿ ಬಿಜೆಪಿ 17, ಕಾಂಗ್ರೆಸ್ 8 ಕ್ಷೇತ್ರ.
ಛತ್ತೀಸ್ ಗಢ: 11 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 6, ಬಿಜೆಪಿ 5 ಕ್ಷೇತ್ರ.
ಒಟ್ಟಾರೆ 543 ಕ್ಷೇತ್ರಗಳ ಪೈಕಿ ಎನ್ಡಿಎ 252, ಯುಪಿಎ 147 ಹಾಗೂ ಇತರರು 144 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಲಿರುವ ಪ್ರಧಾನಿ ನೇತೃತ್ವದ ಎನ್ಡಿಎ ಸರ್ಕಾರ ರಚನೆ ಮಾಡುತ್ತಾ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT