ದೇಶ

ಪುರಿ ಜಗನ್ನಾಥ ರಥ ಯಾತ್ರೆ: ದೇಶದ ಜನತೆಗೆ ರಾಷ್ಟ್ರಪತಿ, ಪ್ರಧಾನಿ ಶುಭಾಶಯ

Sumana Upadhyaya
ನವದೆಹಲಿ: ಪುರಿಯ ಜಗನ್ನಾಥ ದೇವರ ರಥ ಯಾತ್ರೆಯ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಅವರು,ಪುರಿ ಜಗನ್ನಾಥ ರಥ ಯಾತ್ರೆಯ ಶುಭ ಗಳಿಗೆಯಲ್ಲಿ ದೇಶದ ಜನತೆಗೆ ಶುಭಾಶಯಗಳು. ಜಗನ್ನಾಥ ದೇವರ ಆಶೀರ್ವಾದದಿಂದ ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ, ಶಾಂತಿ, ಸಂತೋಷ, ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹ ದೇಶದ ಜನತೆಗೆ ಪುರಿ ಜಗನ್ನಾಥ ರಥ ಯಾತ್ರೆ ಸಂದರ್ಭದಲ್ಲಿ ಶುಭ ಕೋರಿದ್ದಾರೆ. 
ಒರಿಸ್ಸಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರತ ಯಾತ್ರೆ ಇಂದು ಆರಂಭವಾಗಿದೆ. ರಥ ಯಾತ್ರೆಯಲ್ಲಿ ಮೂರು ದೇವತೆಗಳಾದ ಬಲಭದ್ರ, ಜಗನ್ನಾಥ ಮತ್ತು ಸುಭದ್ರಾ ದೇವಿಯ ಮೂರ್ತಿಗಳನ್ನು ಪ್ರತಿವರ್ಷ ನಿರ್ಮಿಸಲಾಗುತ್ತದೆ. ಸಾಂಪ್ರದಾಯಿಕ ಕಲಾವಿದರು ಮೂರ್ತಿಗಳನ್ನು ತಯಾರಿಸಿ ಅಲಂಕಾರ ಮಾಡುತ್ತಾರೆ. ದೇವರನ್ನು ಹೊರುವ ರಥ ನಿರ್ಮಿಸಲು ಆರಂಭಿಸುವುದು ಪವಿತ್ರ ಅಕ್ಷಯ ತೃತೀಯ ದಿನ.
ಹಲವು ತಿಂಗಳುಗಳ ಕಾಲ ಸಾವಿರಾರು ಕುಶಲಕರ್ಮಿಗಳು ಮರ ಕಡಿಯುವುದರಿಂದ ಹಿಡಿದು ರಥವನ್ನು ಜೋಡಿಸುವುದು, ಚಿತ್ರಕಲೆ ಮಾಡುವ ಕೆಲಸ ಮಾಡುತ್ತಾರೆ. ಪುರಿ ಜಗನ್ನಾಥ ಸ್ವಾಮಿಯ ಯಾತ್ರೆಯಲ್ಲಿ ರಥವು ಮುಖ್ಯ ಆಕರ್ಷಣೆಯಾಗಿರುತ್ತದೆ. 
SCROLL FOR NEXT