ಕಾರ್ಗಿಲ್ ಯುದ್ಧದ 20 ವರ್ಷಗಳ ಬಳಿಕ ಆಪರೇಷನ್ ವಿಜಯ್ ನೆನಪು ಮರುಸೃಷ್ಟಿ: ಸೇನೆಯಿಂದ ಹುತಾತ್ಮರಿಗೆ ನಮನ 
ದೇಶ

ಕಾರ್ಗಿಲ್ ಯುದ್ಧದ 20 ವರ್ಷಗಳ ಬಳಿಕ ಆಪರೇಷನ್ ವಿಜಯ್ ನೆನಪು ಮರುಸೃಷ್ಟಿ: ಸೇನೆಯಿಂದ ಹುತಾತ್ಮರಿಗೆ ನಮನ

ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ ಭಾರತೀಯ ಸೇನೆ ಆಪರೇಷನ್ ವಿಜಯ್ ನೆನಪನ್ನು ಮರುಸೃಷ್ಟಿ ಮಾಡಿದೆ.

ಕಾರ್ಗಿಲ್: ಕಾರ್ಗಿಲ್ ಯುದ್ಧದ 20 ವರ್ಷಗಳ ನಂತರ ಭಾರತೀಯ ಸೇನೆ ಆಪರೇಷನ್ ವಿಜಯ್ ನೆನಪನ್ನು ಮರುಸೃಷ್ಟಿ ಮಾಡಿದೆ. 
2 ರಜಪುತಾನ ರೈಫಲ್ಸ್ ತಂಡ ತೊಲೊಲಿಂಗ್ ತುದಿಗೆ ಕಾಲ್ನಡಿಗೆಯಲ್ಲಿ ತಲುಪಿದ್ದು, ಟೈಗರ್ ಹಿಲ್ ನಲ್ಲಿ ಬಲಿದಾನ ಮಾಡಿ ಪಾಕಿಸ್ತಾನದ ವಿರುದ್ಧ ಸಾಧಿಸಿದ ವಿಜಯವನ್ನು ಸ್ಮರಿಸಿದ್ದಾರೆ. ಇದೇ ವೇಳೆ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ್ದಾರೆ. 
ಕಾಲ್ನಡಿಗೆಯಲ್ಲಿ ತೊಲೊಲಿಂಗ್ ತುದಿಗೆ ತಲುಪಿದ್ದನ್ನು ಭಾರತೀಯ ಸೇನೆಯ ಉತ್ತರ ಕಮಾಂಡ್ ಟ್ವೀಟ್ ಮಾಡಿದ್ದು, ಅಸಮಾನ್ಯ ವಿಜಯವನ್ನು ಆಚರಣೆ ಮಾಡುತ್ತಿರುವುದಾಗಿ ಹೇಳಿದೆ.
ಜೂ.22 ರಂದು ಜೈಸಲ್ಮೇರ್ ನಿಂದ 2 ಆರ್ ಎಜೆಆರ್ ಐ ಎಫ್ ನ ತಂಡ ತೊಲೊಲಿಂಗ್ ಬೆಟ್ಟಕ್ಕೆ ಕಾಲ್ನಡಿಗೆಯನ್ನು ಪ್ರಾರಂಭಿಸಿತ್ತು. ಇದೇ ವೇಳೆ ಜಮ್ಮು-ಕಾಶ್ಮೀರ್ ರೈಫಲ್ಸ್ ತಂಡವೂ ಬಾತ್ರಾ ಟಾಪ್ ಹಾಗೂ ಟೈಗರ್ ಹಿಲ್ ಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಆಪರೇಷನ್ ವಿಜಯ್ ನೆನಪಿನಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT