ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ 
ದೇಶ

ಲೋಕಸಭೆಯಿಂದ ಹೊಸ ದಾಖಲೆ; ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ

ಲೋಕಸಭೆ ರೈಲ್ವೆ ಸಚಿವಾಲಯದ ಅನುಧಾನ ಬೇಡಿಕೆಗಳ ಕುರಿತ ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ.

ನವದೆಹಲಿ: ಲೋಕಸಭೆ  ರೈಲ್ವೆ ಸಚಿವಾಲಯದ  ಅನುಧಾನ ಬೇಡಿಕೆಗಳ ಕುರಿತ  ಚರ್ಚೆ ಗುರುವಾರ ಮಧ್ಯರಾತ್ರಿಯವರೆಗೂ ನಡೆಸುವ ಮೂಲಕ  ಸಂಸತ್ತಿನ ಕೆಳಮನೆ ಹೊಸ ದಾಖಲೆ ನಿರ್ಮಿಸಿದೆ. 
ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆ ಮೇಲಿನ ಚರ್ಚೆ ಗುರುವಾರ ರಾತ್ರಿ 11.58ರವರೆಗೆ ನಡೆಯಿತು. 
ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಂಸತ್ತಿನ ಕೆಳಮನೆ  ಸುಧೀರ್ಘವಾಗಿ ಕಲಾಪ ನಡೆಸಿದೆ ಎಂದು  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ  ಟ್ವೀಟ್ ಮಾಡಿದ್ದಾರೆ.ಲೋಕಸಭೆಯಲ್ಲಿ ರೈಲ್ವೆ ಅನುದಾನಗಳ ಬೇಡಿಕೆ ಮೇಲಿನ ಚರ್ಚೆ  ಗುರುವಾರ ಮಧ್ಯರಾತ್ರಿಯವರೆಗೆ ನಡೆಯಿತು. ತಮ್ಮ ಲೋಕಸಭಾ ಕ್ಷೇತ್ರಗಳಿಗೆ   ಅನುದಾನ ಹೆಚ್ಚಿಸಬೇಕು ಹಾಗೂ ರೈಲ್ವೆ ಕುರಿತ ಸರ್ಕಾರದ   ನೀತಿಯ ಕುರಿತು ಸದಸ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರೈಲ್ವೆ ಸಚಿವಾಲಯದ  ಕಾರ್ಯನಿರ್ವಹಣೆ ಕುರಿತಂತೆ  ಬಹುತೇಕ ಎಲ್ಲ ಸದಸ್ಯರು ಮಾತನಾಡಲು ಹಾಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು  ಅವಕಾಶ ನೀಡಿದ ಸ್ಪೀಕರ್ ಓಂ ಬಿರ್ಲಾ  ಅವರಿಗೆ ರೈಲ್ವೆ ಸಚಿವ  ಪಿಯೂಷ್ ಗೋಯಲ್  ಧನ್ಯವಾದ ಸಲ್ಲಿಸಿದ್ದಾರೆ.
ಸದನದಲ್ಲಿ ತಮ್ಮ ಮುಂದೆ   ಒಟ್ಟು  99 ಸದಸ್ಯರು  ರೈಲ್ವೆ ಸಚಿವಾಲಯದ ಕಾರ್ಯನಿರ್ವಹಣೆ ಕುರಿತು  ಮಾತನಾಡಿದರು,  ರೈಲ್ವೆ ಅನುದಾನ ಬೇಡಿಕೆಗಳ ಮಾತನಾಡಿದವರ ಪೈಕಿ  ನಾನು ನೂರನೇಯವನಾಗಿದ್ದೆ  ಎಂದು ಗೋಯಲ್ ಹೇಳಿದ್ದಾರೆ.
ರೈಲ್ವೆ ಬೇಡಿಕೆಗಳ ಬಗ್ಗೆ  ಸದಸ್ಯರ  ಭಾಷಣವನ್ನು   ಶಾಂತಿಯಿಂದ  ಆಲಿಸಿದ  ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಸಂಯಮವನ್ನು ಸಹ   ರೈಲ್ವೆ ಖಾತೆ ಸಂಪುಟ ಸಚಿವ ಪಿಯೂಷ್ ಗೋಯಲ್ ಕೊಂಡಾಡಿದ್ದಾರೆ. ಮಧ್ಯರಾತ್ರಿಯವರೆಗೂ  ಕಾರ್ಯನಿರ್ವಹಿಸಿದ  ಲೋಕಸಭಾ ಕಾರ್ಯಾಲಯ ಸಿಬ್ಬಂದಿ  ಹಾಗೂ ಮಾಧ್ಯಮ ಮಂದಿಗೆ  ಪಿಯೂಷ್ ಗೋಯಲ್ ಧನ್ಯವಾದ ಸಲ್ಲಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT