ದೇಶ

ನನಗೆ ಮೋದಿ ಮೇಲೆ ವಿಶ್ವಾಸವಿದೆ: ಕಾಂಗ್ರೆಸ್ ನಾಯಕ

Srinivas Rao BV
ತಿರುವನಂತಪುರಂ: ನನಗೆ ಮೋದಿ ಮೇಲೆ ವಿಶ್ವಾಸವಿದೆ ಎಂದು ಪಕ್ಷದಿಂದ ಉಚ್ಚಾಟನೆಗೊಂಡಿರುವ ಕಾಂಗ್ರೆಸ್ಸಿಗ ಎಪಿ ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ. 
ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಮೋದಿ ಅವರ ಗೆಲುವಿಗೆ ಕಾರಣ ವಿಶ್ಲೇಷಿಸಿರುವ ಅಬ್ದಿಲ್ಲಾ ಕುಟ್ಟಿ, ಮೋದಿ ಅವರು ಆಡಳಿತದಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಿದ್ದು ಗೆಲುವಿಗೆ ಕಾರಣವಾಯಿತು ಎಂದು ಅಬ್ದುಲ್ಲಾ ಕುಟ್ಟಿ ಹೇಳಿದ್ದಾರೆ. 
ಅಬ್ದುಲ್ಲಾ ಕುಟ್ಟಿ ಕಾಂಗ್ರೆಸ್ ಪಕ್ಷದಲ್ಲೇ ಇದ್ದುಕೊಂಡು ಮೋದಿ ಪರ ಹೇಳಿಕೆ ನೀಡಿದ್ದು ಇದೇ ಮೊದಲೇನು ಅಲ್ಲ.  2009 ರಲ್ಲೇ ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ಕೇರಳವೂ ಅನುಸರಿಸಬೇಕೆಂದು ಹೇಳಿಕೆ ನೀಡಿ ಕಾಂಗ್ರೆಸ್ ನ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮೋದಿಯನ್ನು ಹೊಗಳಿದ್ದು, ಮೋದಿ ಮೇಲೆ ತಮಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. 
SCROLL FOR NEXT