ವಿಜಯವಾಡ: ಬೆಂಗಳೂರು ಮೂಲದ ಸಾಫ್ಟ್ ವೇರ್ ಉದ್ಯೋಗಿಯೊಬ್ಬ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ತನ್ನ ತವರೂರಲ್ಲೇ ಭೀಕರವಾಗಿ ಹತ್ಯೆಯಾಗಿದ್ದಾನೆ.
ಕಡಪಾ ಜಿಲ್ಲೆ ರೈಲ್ವೆ ಕೊಡೂರ್ ಗ್ರಾಮದ ಅಬ್ದುಲ್ ಖಾದರ್ (26) ಹತ್ಯೆಯಾಗಿರುವ ದುರ್ದೈವಿ. ಈತ ಬೆಂಗಳೂರಿನಿಂದ ಆಗಮಿಸಿದ ಬಸ್ ನಿಂದಿಳಿದು ತನ್ನ ಮನೆಯತ್ತ ತೆರಳುತ್ತಿರುವಾಗ ಕೃಷ್ಣಾ ಚಿತ್ರಮಂದಿರ ಸಮೀಪ ಅವನನ್ನು ಸುತ್ತುಗಟ್ಟಿದ ಗುಂಪು ಚಾಕು ಹಾಗೂ ಮಾರಕಾಸ್ತ್ರಗಳಿಂದ ಅವನ ಮೇಲೆ ಮನಬಂದ್ಂತೆ ಹಲ್ಲೆ ನಡೆಸಿದೆ. ಇದರಿಂದ ತೀವ್ರ ಗಾಯಗೊಂಡ ಅಬ್ದುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಲ್ಲಿರುವ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಈದ್ ಹಬ್ಬದ ಆಚರಣೆಗಾಗಿ ತನ್ನ ಮನೆಗೆ ಆಗಮಿಸಿದ್ದರು. ಇನ್ನು ಇದೇ ಮುಂದಿನ ತಿಂಗಳಲ್ಲಿ ಆತನ ಮದುವೆ ನಿಶ್ಚಯವಾಗಿತ್ತು.
ಘಟನೆ ಕುರಿತಂತೆ ರೈಲ್ವೇ ಕೊಡೂರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.