ದೇಶ

ಸರ್ಕಾರಿ ಅಧಿಕಾರಿಗಳಿಗೆ ಶೂನಿಂದ ಒಡೆಯಿರಿ: ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಶಾಸಕನ ಸಲಹೆ!

Shilpa D
ಲಕ್ನೋ: ನಿಮಗೆ ಕಿರುಕುಳ ಅಥವಾ ತೊಂದರೆ ಕೊಟ್ಟರೇ, ಬೆದರಿಕೆ ಹಾಕಿದರೆ ಸರ್ಕಾರಿ ಅಧಿಕಾರಿಗಳಿಗೆ ಶೂನಿಂದ ಒಡೆಯಿರಿ ಎಂದು ಬಿಜೆಪಿ ಶಾಸಕ ರಾಮ್ ರತನ್ ಕುಶ್ವಾ ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ.
ಲಲಿತ್ ಪುರ್ ಶಾಸಕ ಕುಶ್ವಾ, ಕಾರ್ಯಕರ್ತರ ಸಭೆಯಲ್ಲಿ ನೀಡಿರುವ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ಸರ್ಕಾರದ ಉದ್ಯೋಗಿಗಳು ಶೀಘ್ರವಾಗಿ ಕೆಲಸ ಮಾಡಿಕೊಡಬೇಕು. ಕೆಲಸ ಮಾಡಿಕೊಡದೇ ಕಿರುಕುಳ ನೀಡಿದರೇ ಅಂಥಹ ಸರ್ಕಾರಿ ನೌಕರರಿಗೆ  ನಿಮ್ಮ ಶೂ ತೆಗೆದು ಅದರಿಂದ ಒಡೆಯಿರಿ ಎಂದು ತಿಳಿಸಿದ್ದಾರೆ 
ಚುನಾವಣಾ ಸಮಯದ ಯಾರಾದರೂ ನಿಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದರೇ ಅಂತವರ ಬಗ್ಗೆ ಜಾಗೃತರಾಗಿರಿ, ಏಕೆಂದರೆ ಅವರು ನಿಮ್ಮ ವಿರುದ್ಧ ಕೇಸ್ ದಾಖಲಿಸಬಹುದು ಎಂದು ಹೇಳಿದ್ದಾರೆ.
SCROLL FOR NEXT