ಸಂಗ್ರಹ ಚಿತ್ರ 
ದೇಶ

ನಿಪಾಹ್ ಆಯ್ತು, ಈಗ 'ಎಇಎಸ್' ಮರಣ ಮೃದಂಗ; ವೈರಾಣು ಸೋಂಕಿಗೆ ಬಿಹಾರದಲ್ಲಿ 69 ಬಲಿ

ಕೇರಳದಲ್ಲಿನ ನಿಪಾಹ್ ವೈರಸ್ ಸೋಂಕು ದುರಂತ ಹಸಿರಾಗಿರುವಂತೆಯೇ ಅತ್ತ ಬಿಹಾರದಲ್ಲಿ 'ಎಇಎಸ್' ಸೋಂಕಿಗೆ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಾಟ್ನಾ: ಕೇರಳದಲ್ಲಿನ ನಿಪಾಹ್ ವೈರಸ್ ಸೋಂಕು ದುರಂತ ಹಸಿರಾಗಿರುವಂತೆಯೇ ಅತ್ತ ಬಿಹಾರದಲ್ಲಿ 'ಎಇಎಸ್' ಸೋಂಕಿಗೆ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ವೈರಾಣು ಸೊಂಕಿಗೆ ಬಿಹಾರದಲ್ಲಿ ಈ ವರೆಗೂ 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಮುಜಾಫರ್ ಪುರದ ತಜ್ಞ ವೈದ್ಯ ಡಾ.ಶೈಲೇಶ್ ಪ್ರಸಾದ್ ಸಿಂಗ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಎಇಎಸ್ ಸೋಂಕಿಗೆ ಈ ವರೆಗೂ ಬಿಹಾರದಲ್ಲಿ 69 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜುವೊಂದರಲ್ಲೇ 58ಮಂದಿ ಸಾವನ್ನಪ್ಪಿದ್ದು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ.
ಎಇಎಸ್ ಎಂಬುದು ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ನ ಸಂಕ್ಷಿಪ್ತ ರೂಪ. ಇದು ಒಂದು ವೈರಾಣು ಸೋಂಕಾಗಿದ್ದು, ಮಿದುಳು ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ. ಸಾಮಾನ್ಯವಾಗಿ ಈ ಎಇಎಸ್ ಸಮಸ್ಯೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕಿಗೆ ಪ್ರಮುಖ ಕಾರಣ ಕಡಿಮೆ ರೋಗ ನಿರೋಧಕ ಶಕ್ತಿ, ಈ ಎಇಎಸ್ ಸೋಂಕು ಕಾಣಿಸಿಕೊಂಡ ರೋಗಿಯಲ್ಲಿ ಜ್ವರ, ಅತಿಯಾದ ತಲೆನೋವು, ಶೀತ, ವಾಂತಿ, ಕತ್ತು ನೋವು ಸಾಮಾನ್ಯ. ರೋಗ ತೀವ್ರಗೊಂಡರೆ ಈ ಸಮಸ್ಯೆಗಳ ಜೊತೆ ಜೊತೆಗೇ ಮರೆಗುಳಿತನ, ಕಿವಿ ಕೇಳದಿರುವಿಕೆ, ತೊದಲುವಿಕೆ, ಭ್ರಮೆ, ನೆನಪಿನ ಶಕ್ತಿ ಕುಂದುವುದು, ಅರೆನಿದ್ರಾವಸ್ಥೆಯಂತಹ ಸಮಸ್ಯೆಗಳು ಬಾಧಿಸುತ್ತವೆ. ಇನ್ನೂ ರೋಗ ಗಂಭೀರವಾದರೆ ರೋಗಿ ಕೋಮಾ ಸ್ಥಿತಿ ಕೂಡ ತಲುಪಬಹುದು ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT