ಸಂಗ್ರಹ ಚಿತ್ರ 
ದೇಶ

ನಿಪಾಹ್ ಆಯ್ತು, ಈಗ 'ಎಇಎಸ್' ಮರಣ ಮೃದಂಗ; ವೈರಾಣು ಸೋಂಕಿಗೆ ಬಿಹಾರದಲ್ಲಿ 69 ಬಲಿ

ಕೇರಳದಲ್ಲಿನ ನಿಪಾಹ್ ವೈರಸ್ ಸೋಂಕು ದುರಂತ ಹಸಿರಾಗಿರುವಂತೆಯೇ ಅತ್ತ ಬಿಹಾರದಲ್ಲಿ 'ಎಇಎಸ್' ಸೋಂಕಿಗೆ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪಾಟ್ನಾ: ಕೇರಳದಲ್ಲಿನ ನಿಪಾಹ್ ವೈರಸ್ ಸೋಂಕು ದುರಂತ ಹಸಿರಾಗಿರುವಂತೆಯೇ ಅತ್ತ ಬಿಹಾರದಲ್ಲಿ 'ಎಇಎಸ್' ಸೋಂಕಿಗೆ ಸುಮಾರು 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಎಂಬ ವೈರಾಣು ಸೊಂಕಿಗೆ ಬಿಹಾರದಲ್ಲಿ ಈ ವರೆಗೂ 69 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಮುಜಾಫರ್ ಪುರದ ತಜ್ಞ ವೈದ್ಯ ಡಾ.ಶೈಲೇಶ್ ಪ್ರಸಾದ್ ಸಿಂಗ್ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಎಇಎಸ್ ಸೋಂಕಿಗೆ ಈ ವರೆಗೂ ಬಿಹಾರದಲ್ಲಿ 69 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಶ್ರೀ ಕೃಷ್ಣ ವೈದ್ಯಕೀಯ ಕಾಲೇಜುವೊಂದರಲ್ಲೇ 58ಮಂದಿ ಸಾವನ್ನಪ್ಪಿದ್ದು, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
2012ರ ಜೂನ್​ನಲ್ಲಿ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಪಾಟ್ನಾದಲ್ಲಿ ಉಲ್ಬಣಿಸಿ ಮೂರೇ ದಿನದಲ್ಲಿ 109ಕ್ಕೂ ಅಧಿಕ ಮಕ್ಕಳನ್ನು ಬಲಿ ತೆಗೆದುಕೊಂಡಿತ್ತು. ರೋಗ ವ್ಯಾಪಿಸಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಟ್ಟೆಚ್ಚರ ವಹಿಸಲಾಗಿದೆ.
ಎಇಎಸ್ ಎಂಬುದು ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್ ನ ಸಂಕ್ಷಿಪ್ತ ರೂಪ. ಇದು ಒಂದು ವೈರಾಣು ಸೋಂಕಾಗಿದ್ದು, ಮಿದುಳು ಸಂಬಂಧಿತ ಸಮಸ್ಯೆಗಳನ್ನು ತರುತ್ತದೆ. ಸಾಮಾನ್ಯವಾಗಿ ಈ ಎಇಎಸ್ ಸಮಸ್ಯೆ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಸೋಂಕಿಗೆ ಪ್ರಮುಖ ಕಾರಣ ಕಡಿಮೆ ರೋಗ ನಿರೋಧಕ ಶಕ್ತಿ, ಈ ಎಇಎಸ್ ಸೋಂಕು ಕಾಣಿಸಿಕೊಂಡ ರೋಗಿಯಲ್ಲಿ ಜ್ವರ, ಅತಿಯಾದ ತಲೆನೋವು, ಶೀತ, ವಾಂತಿ, ಕತ್ತು ನೋವು ಸಾಮಾನ್ಯ. ರೋಗ ತೀವ್ರಗೊಂಡರೆ ಈ ಸಮಸ್ಯೆಗಳ ಜೊತೆ ಜೊತೆಗೇ ಮರೆಗುಳಿತನ, ಕಿವಿ ಕೇಳದಿರುವಿಕೆ, ತೊದಲುವಿಕೆ, ಭ್ರಮೆ, ನೆನಪಿನ ಶಕ್ತಿ ಕುಂದುವುದು, ಅರೆನಿದ್ರಾವಸ್ಥೆಯಂತಹ ಸಮಸ್ಯೆಗಳು ಬಾಧಿಸುತ್ತವೆ. ಇನ್ನೂ ರೋಗ ಗಂಭೀರವಾದರೆ ರೋಗಿ ಕೋಮಾ ಸ್ಥಿತಿ ಕೂಡ ತಲುಪಬಹುದು ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಎರಡನೇ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ; ಮೂರನೇ ತ್ರೈಮಾಸಿಕದ ಸಂಕಷ್ಟದ ಬಗ್ಗೆ ಬಾಲಿವುಡ್ ನಟಿ ಮಾತು!

ಪೊಲೀಸರು ಡೀಲ್- ಅಪರಾಧಗಳಲ್ಲಿ ಭಾಗಿಯಾಗಬೇಡಿ, ಲಂಚ ಕೊಟ್ಟು ಇಲಾಖೆ ಸೇರಬೇಡಿ: ದೇವಾಲಯಗಳ ಹುಂಡಿ ರಕ್ಷಣೆಗೆ ತೀರ್ಮಾನ; ಸಿಎಂ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ ವ್ಯಾಪಾರದ ಗುರಿ; Video

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video