ದೇಶ

ಯಾವುದೇ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳಲ್ಲ: ಸಿಪಿಎಂ ಮುಖಂಡ ಕೊಡಿಯೇರಿ ಬಾಲಕೃಷ್ಣನ್

Shilpa D
ತಿರುವನಂತಪುರ: ಅತ್ಯಾಚಾರ ಆರೋಪ ಹೊಂದಿರುವ ಮಗನನ್ನು ರಕ್ಷಿಸಲು ನಾನು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ಎಂದು ಕೇರಳ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. 
ಹಿರಿಯ ಮಗನಾದ ಬಿನೊಯ್ ಕೊಡಿಯೇರಿ ವಿರುದ್ಧ 33 ವರ್ಷದ ಮಹಿಳೆ ದೂರು ದಾಖಲಿಸಿರುವ ಪ್ರಕರಣದ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನನ್ನ ಪಕ್ಷ (ಸಿಪಿಐ-ಎಂ) ಅಥವಾ ನಾನು ಬಿನೊಯ್ ಕೊಡಿಯೇರಿಯನ್ನು ರಕ್ಷಿಸುವುದಿಲ್ಲ. ಅವನು ವಯಸ್ಕ. ಅವನು ಸ್ವತಂತ್ರವಾಗಿ ಬದುಕುತ್ತಾನೆ ಮತ್ತು ತಾನು ಮಾಡಿರುವ ಕಾರ್ಯಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ಖಡಕ್ ಆಗಿ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ಅತ್ಯಾಚಾರ ವಿಚಾರವಾಗಿ ವಿವಾದ ಭುಗಿಲೆದ್ದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮಗಳಿಗೆ ಕೊಡಿಯೇರಿ ಬಾಲಕೃಷ್ಣನ್ ಪ್ರತಿಕ್ರಿಯೆ ನೀಡಿದ್ದಾರೆ.ಮುಂಬೈನ ಮಾಜಿ ಬಾರ್ ನರ್ತಕಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಬಿನೊಯ್ ಕೊಡಿಯೇರಿ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.  ಅಲ್ಲದೆ ಇಬ್ಬರಿಗೆ 8 ವರ್ಷದ ಮಗನಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. 
SCROLL FOR NEXT