ಜಾರ್ಖಂಡ್: ಜೈ ಶ್ರೀರಾಮ್ ಪಠಣಕ್ಕೆ ಒತ್ತಾಯ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು! 
ದೇಶ

ಜಾರ್ಖಂಡ್: ಜೈ ಶ್ರೀರಾಮ್ ಪಠಣಕ್ಕೆ ಒತ್ತಾಯ, ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು!

ಕಳ್ಳತನದ ಶಂಕೆ ಮೇಲೆ ಸ್ಥಳೀಯ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಜಾರ್ಖಂಡ್ ನ ಯುವಕ ಸಾವನ್ನಪ್ಪಿದ್ದಾನೆ.

ಜಾರ್ಖಂಡ್: ಕಳ್ಳತನದ ಶಂಕೆ ಮೇಲೆ ಸ್ಥಳೀಯ ಗುಂಪಿನಿಂದ ಹಲ್ಲೆಗೊಳಗಾಗಿದ್ದ ಜಾರ್ಖಂಡ್ ನ ಯುವಕ ಸಾವನ್ನಪ್ಪಿದ್ದಾನೆ. 
24 ವರ್ಷದ ಶಮ್ಸ್ ತಬ್ರೇಜ್ ಯನ್ನು ಸ್ಥಳೀಯರ ಗುಂಪೊಂದು ಮರಕ್ಕೆ ಕಟ್ಟಿ ಹಾಕಿ ಸುಮಾರು 18 ಗಂಟೆಗಳ ಕಾಲ ಸತತವಾಗಿ ಥಳಿಸಲಾಗಿತ್ತು.  ಅಷ್ಟೇ ಅಲ್ಲದೇ ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗುವಂತೆ ಒತ್ತಾಯಿಸಲಾಗಿತ್ತು. ಇದಾದ ಬಳಿಕ ಪೊಲೀಸರಿಗೆ ಒಪ್ಪಿಸಲಾಗಿತ್ತು. 
ತಬ್ರೇಜ್ ನ್ನು ಕಳ್ಳತನದ ಶಂಕೆಯ ಮೇಲೆ ಥಳಿಸಲಾಗಿಲ್ಲ, ಆತನ ಮುಸ್ಲಿಂ ಹೆಸರನ್ನು ನೋಡಿ ಥಳಿಸಲಾಗಿದ್ದು, ಇದು ಕೋಮುದಾಳಿಯಾಗಿದೆ. ಆಸ್ಪತ್ರೆಯಲ್ಲೂ ಆತನನ್ನು ನೋಡುವುದಕ್ಕೆ ನಮಗೆ ಅವಕಾಶ ನೀಡಲಿಲ್ಲ ಎಂದು ಮೃತನ ಸಂಬಂಧಿ ಮಕ್ಸೂದ್ ಆಲಮ್ ಹೇಳಿದ್ದಾರೆ. 
ಪೊಲೀಸರು ಘಟನೆಯಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದು, ಅವರ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಆಲಮ್ ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT