ಜೈ ಶ್ರೀರಾಮ್ ಹೇಳದ್ದಕ್ಕೆ ಯುವಕನಿಗೆ ಥಳಿತ 
ದೇಶ

ಜೈ ಶ್ರೀರಾಮ್ ಹೇಳದ್ದಕ್ಕೆ ಯುವಕನಿಗೆ ಥಳಿತ

ಜೈ ಶ್ರೀರಾಮ್ ಘೋಷಣೆ ಹೇಳದ್ದಕ್ಕೆ 16 ವರ್ಷದ ಯುವಕನಿಗೆ ಅನಾಮಿಕ ವ್ಯಕ್ತಿಗಳು ಮನಸೋ ಇಚ್ಛೆ ಥಳಿಸಿರುವ ಘಟನೆ ಖಾನ್ ಪುರದಲ್ಲಿ ನಡೆದಿದೆ.

ಜೈ ಶ್ರೀರಾಮ್ ಘೋಷಣೆ ಹೇಳದ್ದಕ್ಕೆ 16 ವರ್ಷದ ಯುವಕನಿಗೆ ಅನಾಮಿಕ ವ್ಯಕ್ತಿಗಳು ಮನಸೋ ಇಚ್ಛೆ ಥಳಿಸಿರುವ ಘಟನೆ ಖಾನ್ ಪುರದಲ್ಲಿ ನಡೆದಿದೆ. 
ಮೊಹಮ್ಮದ್ ತಾಜ್ ಹಲ್ಲೆಗೊಳಗಾದ ಯುವಕನಾಗಿದ್ದು, ಆತ ಸಾಂಪ್ರದಾಯಿಕ ಟೋಪಿ ಹಾಕಿಕೊಂಡಿದ್ದ ಹಾಗೂ ಜೈ ಶ್ರೀರಾಮ್ ಘೋಷಣೆ ಹೇಳಲು ನಿರಾಕರಿಸಿದ್ದ. 
ನಮಾಜ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಮೊಹಮ್ಮದ್ ತಾಜ್ ಮೇಲೆ ಹಲ್ಲೆ 3-4 ಜನ ಅನಾಮಿಕ ದ್ವಿಚಕ್ರ ವಾಹನ ಸವಾರರು ಆತನನ್ನು ತಡೆದಿದ್ದು ಸಾಂಪ್ರದಾಯಿಕ ಟೋಪಿ ಧರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹಿಸಿದ್ದಾರೆ ಒಪ್ಪದೇ ಇದ್ದಾಗ ಟೋಪಿಯನ್ನು ಕಿತ್ತೆಸೆದು ಆತನನ್ನು ಒದ್ದು, ಥಳಿಸಿದ್ದಾರೆ.  
ಘಟನೆ ಬಗ್ಗೆ ಮೊಹಮ್ಮದ್ ತಾಜ್ ಹೇಳಿಕೆ ನೀಡಿದ್ದು, ಥಳಿಸಿದ ವ್ಯಕ್ತಿಗಳು ಈ ಪ್ರದೇಶದಲ್ಲಿ ಸಾಂಪ್ರದಾಯಿಕ ಟೋಪಿ ಹಾಕಿಕೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಎಚ್ಚರಿಸಿದ್ದಾಗಿ ಹೇಳಿದ್ದಾನೆ. 
ತಾನು ಸಹಾಯಕ್ಕಾಗಿ ಕೇಳುತ್ತಿದ್ದಾಗ ಸ್ಥಳೀಯರು ಬಂದು ರಕ್ಷಿಸಿದರು, ಈ ಬೆನ್ನಲ್ಲೆ ಆಕ್ರಮಣ ಮಾಡಿದವರು ಪರಾರಿಯಾಗಿದ್ದರೆಂದು ಮೊಹಮ್ಮದ್ ತಾಜ್ ಹೇಳಿದ್ದಾನೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT