ದೇಶ

ವಿರೋಧ ಪಕ್ಷಗಳ ಕ್ಷುಲ್ಲಕ ರಾಜಕೀಯದಿಂದ ಶತ್ರುಗಳಿಗೆ ಅನುಕೂಲವಾಗುತ್ತಿದೆ; ಪ್ರಧಾನಿ ಮೋದಿ

Sumana Upadhyaya
ವಿಶಾಖಪಟ್ನಂ: ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿರೋಧ ಪಕ್ಷಗಳ ಕ್ಷುಲ್ಲಕ ರಾಜಕಾರಣದಲ್ಲಿ ತೊಡಗಿಕೊಂಡಿರುವುದರಿಂದ ಶತ್ರುಗಳಿಗೆ ಲಾಭವಾಗಿದ್ದು ದೇಶದ ಬೆಳವಣಿಗೆ ಕಡೆ ಗಮನ ಹರಿಸುವ ಬದಲು ತಮ್ಮನ್ನು ಅಧಿಕಾರದಿಂದ ಕಿತ್ತೊಗೆಯುವುದು ಒಂದೇ ವಿರೋಧ ಪಕ್ಷಗಳ ಚುನಾವಣಾ ಅಜೆಂಡಾವಾಗಿದೆ ಎಂದು ಆರೋಪಿಸಿದ್ದಾರೆ.
ಇಡೀ ವಿಶ್ವವೇ ಪಾಕಿಸ್ತಾನದಿಂದ ಭಯೋತ್ಪಾದನೆ ಬಗ್ಗೆ ಉತ್ತರ ಬಯಸುತ್ತಿರುವಾಗ ಭಾರತದಲ್ಲಿ ಕೆಲವರು ಈ ಹೊತ್ತಿನಲ್ಲಿ ದೇಶದ ಭದ್ರತಾ ಪಡೆಯನ್ನು ದುರ್ಬಲಗೊಳಿಸಲು ಈ ನೆಲದಲ್ಲಿರುವವರೇ ಕೆಲವರು ಪ್ರಯತ್ನಿಸುತ್ತಿರುವುದು ದುರದೃಷ್ಟಕರ ಎಂದು ವಿಶಾಖಪಟ್ಣಂನಲ್ಲಿ ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಪರೋಕ್ಷವಾಗಿ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದರು.
ನೀವು ಏನು ಮಾತನಾಡುತ್ತಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು, ನಿಮ್ಮ ಮಾತುಗಳನ್ನು ಪಾಕಿಸ್ತಾನ ಸಂಸತ್ತಿನಲ್ಲಿ ಶ್ಲಾಘಿಸಲಾಗಿದೆ ಮತ್ತು ಅವರು ಅದನ್ನು ಭಾರತವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ಇಲ್ಲಿ ಪಕ್ಷಗಳು ಕಲಬೆರಕೆಯ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿದ್ದು ಅದು ದೇಶದ ಶತ್ರುಗಳಿಗೆ ಸುಲಭ ಮಾಡಿಕೊಡುತ್ತಿದೆ. ಮೋದಿಯನ್ನು ದ್ವೇಷಿಸುವ ಹೆಸರಿನಲ್ಲಿ ದೇಶವನ್ನು ದ್ವೇಷಿಸುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.
SCROLL FOR NEXT