ದೇಶ

ಚೌಕಾಸಿ ಇಲ್ಲದೆ ಅಭಿನಂದನ್ ಬಿಡುಗಡೆಗೊಳಿಸಿದ ಇಮ್ರಾನ್ ಖಾನ್ ಗೆ ಅಭಿನಂದನೆ- ದಿಗ್ವಿಜಯ್ ಸಿಂಗ್

Nagaraja AB

ಇಂದೋರ್: ಪಾಕಿಸ್ತಾನ ಸೇನೆ ಹಾಗೂ ಐಎಸ್ ಐನಿಂದ ಒತ್ತಡಕ್ಕೊಳಗಾಗಿದ್ದರೂ ಯಾವುದೇ ಚೌಕಾಸಿ ಇಲ್ಲದೆ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಬಿಡುಗಡೆಗೊಳಿಸಿದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

ಯಾವುದೇ ಚೌಕಾಸಿ ನಡೆಸದೆ ಅಭಿನಂದನ್  ಭಾರತಕ್ಕೆ ಮರಳುವಂತೆ ಮಾಡಿರುವ ಇಮ್ರಾನ್ ಖಾನ್ ಅಭಿನಂದನೆಗೆ ಅರ್ಹರು.ಈಗ  ಪಾಕಿಸ್ತಾನದಲ್ಲಿರುವ  ಉಗ್ರರಾದ ಮಸೂದ್ ಅಝಾರ್ ಹಾಗೂ ಹಪೀಜ್ ಸೈಯದ್ ಅವರನ್ನು ಭಾರತಕ್ಕೆ ಒಪ್ಪಿಸುವಂತೆ ಇಮ್ರಾನ್ ಖಾನ್ ಅವರನ್ನು ಒತ್ತಾಯಿಸಿದ್ದಾರೆ.

ಹಪೀಜ್ ಮೊಹಮ್ಮದ್ ಸಯ್ಯದ್ ಲಷ್ಕರ್ -ಇ- ತೊಯ್ಬಾ ಸಂಘಟನೆ ಸಹ ಸಂಸ್ಥಾಪಕರಲ್ಲಿ ಒಬ್ಬನಾಗಿದ್ದು, ಪಾಕಿಸ್ತಾನದಿಂದ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ಮಸೂದ್ ಅಝಾರ್  ಜೈಷ್- ಇ- ಮೊಹಮ್ಮದ್ ಸಂಘಟನೆಯ ಸ್ಥಾಪಕನಾಗಿದ್ದು, ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತಿತರ ಕಡೆಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಪಠಾಣ್ ಕೋಟ್ ದಾಳಿ ನಂತರ ಆತನ ಬಂಧನಕ್ಕೆ ವ್ಯಾಪಕ ಆಗ್ರಹ ಕೇಳಿಬಂದ ಹಿನ್ನೆಲೆಯಲ್ಲಿ ಪಾಕಿಸ್ತಾನ ಆತನಿಗೆ ರಕ್ಷಣೆ ಒದಗಿಸುತ್ತಿದೆ.

SCROLL FOR NEXT