ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ 
ದೇಶ

ಅಜ್ಮೀರ್ ಶರೀಫ್ ನಲ್ಲಿ ಪ್ರಧಾನಿ ಪರವಾಗಿ ನಖ್ವಿ ಅವರಿಂದ 'ಚಾದರ್' ಸಮರ್ಪಣೆ

ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.

ಜೈಪುರ: ಖ್ವಾಜ ಮೊಯಿನುದ್ದೀನ್‍ ಚಿಸ್ತಿ ದರ್ಗಾದಲ್ಲಿ 807ನೇ ವಾರ್ಷಿಕ ಉರುಸ್‍ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಬುಧವಾರ 'ಚಾದರ್' ಸಮರ್ಪಿಸಿದರು.
ಕ್ರಿ.ಶ1141-1236ರ ವರೆಗೆ ಜೀವಿಸಿದ್ದ ಸಂತ ಖ್ವಾಜಾ ಮೊಯಿನುದ್ದೀನ್‍ ಅವರ ದರ್ಗಾಕ್ಕೆ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ನಖ್ವಿ ಭೇಟಿ ನೀಡಿದರು. ಬುಲಂದ್ ದರ್ವಾಜಾದಲ್ಲಿ ಸಂದೇಶವನ್ನು ಓದಿದ ಸಚಿವರು, ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು.
 ಮೋದಿಯವರು ತಮ್ಮ ಸಂದೇಶದಲ್ಲಿ, ವಾರ್ಷಿಕ ಉರುಸ್‍ ಅಂಗವಾಗಿ ಖ್ವಾಜ ಮೊಯಿನುದ್ದೀನ್ ಅನುಯಾಯಿಗಳಿಗೆ ಶುಭ ಕೋರಿದ್ದಾರೆ. ವೈವಿಧ್ಯತೆಯಲ್ಲಿ  ಏಕತೆಯು ದೇಶದ ಸೌಂದರ್ಯವಾಗಿದೆ. ನಮ್ಮ ದೇಶದ ಸಂತರು ಶಾಂತಿ ಮತ್ತು ಐಕ್ಯತೆಯ ಸಂದೇಶವನ್ನು ಎಲ್ಲ ಕಾಲಕ್ಕೂ ಸಾರಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಧಾನಿಯವರು ಒಬ್ಬ ಸೈನಿಕರಾಗಿದ್ದು, ಸಂತರು ಮತ್ತು ಸೂಫಿಗಳ  ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ ಎಂದು ನಖ್ವಿ ಹೇಳಿದ್ದಾರೆ. 
ನಮ್ಮ ದೇಶ ಭಯೋತ್ಪಾದನೆ ಮುಕ್ತವಾಗಲೆಂಬ ಪ್ರಾರ್ಥನೆಯನ್ನು  ಗರೀಬ್ ನವಾಜ್‍ ಸ್ವೀಕರಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು  ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT