ದೇಶ

ರಾತ್ರಿ ಸೊಳ್ಳೆಗಳನ್ನು ಸಾಯಿಸಿದೆ, ಸಂಖ್ಯೆ ಎಣಿಸುತ್ತಾ ಕೂರಬೇಕೋ ಅಥವಾ ಮಲಗಬೇಕೋ?: ವಿಕೆ ಸಿಂಗ್ ವ್ಯಂಗ್ಯ!

Srinivas Rao BV
ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಭಾರತೀಯ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರರು ಹತ್ಯೆಯಾಗಿರುವುದಕ್ಕೆ ಸಾಕ್ಷ್ಯ ಕೇಳುತ್ತಿರುವ ಪ್ರತಿಪಕ್ಷಗಳಿಗೆ ಕೇಂದ್ರ ಸಚಿವ ವಿಕೆ ಸಿಂಗ್ ತೀಕ್ಷ್ಣವಾದ ವ್ಯಂಗ್ಯಭರಿತ ತಿರುಗೇಟು ನೀಡಿದ್ದಾರೆ. 
ಟ್ವೀಟ್ ಮಾಡಿರುವ ವಿಕೆ ಸಿಂಗ್, ರಾತ್ರಿ 3:30 ರ ವೇಳೆ ಸೊಳ್ಳೆ ಕಾಟ ಜಾಸ್ತಿ ಆಗಿತ್ತು. ನಾನು ಹಿಟ್ ಬಳಸಿ ಸೊಳ್ಳೆಗಳನ್ನು ಸಾಯಿಸಿದೆ. ಈಗ ನಾನು ಸತ್ತ ಸೊಳ್ಳೆಗಳ ಸಂಖ್ಯೆ ಎಣಿಸುತ್ತಾ ಕೂರಲೋ ಅಥವಾ ನಿದ್ದೆ ಮಾಡಲೋ? ಎಂದು ಪ್ರಶ್ನಿದಿದ್ದಾರೆ. 
ಪ್ರತಿಪಕ್ಷಗಳು ವೈಮಾನಿಕ ದಾಳಿಯ ಸಾಕ್ಷ್ಯ ಕೇಳುತ್ತಿರುವುದಕ್ಕೆ  ವಿಕೆ ಸಿಂಗ್ ವ್ಯಂಗ್ಯ ಭರಿತ ಟ್ವೀಟ್ ಮಾಡಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿರುವುದು ಸ್ಪಷ್ಟವಾಗಿದೆ.
SCROLL FOR NEXT