ದೇಶ

ಪಾಕಿಸ್ತಾನದಿಂದ ಮತ್ತೆ ಮೂರು ಕಡೆಗಳಲ್ಲಿ ಕದನ ವಿರಾಮ ಉಲ್ಲಂಘನೆ: ವಿಶೇಷ ಪೊಲೀಸ್ ಅಧಿಕಾರಿಗೆ ಗಾಯ

Nagaraja AB

ರಜೌರಿ: ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡಂತೆ ಇರುವ ಜಮ್ಮು-ಕಾಶ್ಮೀರದಲ್ಲಿನ ಮೂರು ಕಡೆಗಳಲ್ಲಿ ಇಂದು ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿದೆ.

ಜಮ್ಮು- ಕಾಶ್ಮೀರದ ರಜೌರಿ, ಪೊಂಛ್, ಮತ್ತು ಅಕ್ನೂರು ವಲಯಗಳಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿದ್ದಾರೆ.

ಪೊಂಛ್ ವಲಯದಲ್ಲಿ ಇಂದು ಬೆಳಗ್ಗೆ ಪಾಕಿಸ್ತಾನಿ ಸೈನಿಕರು ಭಾರೀ ಶೆಲ್ ದಾಳಿ ನಡೆಸಿದ್ದರಿಂದ ವಿಶೇಷ ಪೂಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ನಂತರ ಇಂದು ಸಂಜೆ ಅಕ್ನೋರು ವಲಯದ  ಕೆರಿ ಬೆಟ್ಟಲ್ ಪ್ರದೇಶದಲ್ಲಿ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘಿಸಿದ್ದಾರೆ. ರಜೌರಿ ಜಿಲ್ಲೆಯ ಸುಂದರ್ ಬನಿ ವಲಯದಲ್ಲೂ ಕದನ ವಿರಾಮ ಉಲ್ಲಂಘನೆಯಾಗಿದೆ ಎಂಬುದು ತಿಳಿದುಬಂದಿದೆ.

SCROLL FOR NEXT