ದೇಶ

ಲೋಕಸಭೆ ಚುನಾವಣೆ: ಅಮೃತಸರದಿಂದ ಮನ್ ಮೋಹನ್ ಸಿಂಗ್ ಸ್ಪರ್ಧಿಸಲ್ಲ- ಅಮರೀಂದರ್ ಸಿಂಗ್

Nagaraja AB

ಚಂಡೀಘಡ: ಮಾಜಿ ಪ್ರಧಾನ ಮಂತ್ರಿ ಮನ್ ಮೋಹನ್ ಸಿಂಗ್   ಅವರನ್ನು ಅಮೃತಸರದಿಂದ ಕಾಂಗ್ರೆಸ್ ಕಣಕ್ಕಿಳಿಸಲಿದೆ ಎಂಬ  ವರದಿಗಳನ್ನು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್  ತಳ್ಳಿ ಹಾಕಿದ್ದಾರೆ.

ಎಎಪಿ ಅಥವಾ ಇನ್ನಿತರ ಪಕ್ಷಗಳೊಂದಿಗೆ ಪಂಜಾಬಿನಲ್ಲಿ ಯಾವುದೇ ಮೈತ್ರಿ ಬಗೆಗಿನ ಮಾತುಕತೆ ಬಗ್ಗೆಯೂ ನಿರಾಕರಿಸಿದ್ದಾರೆ. ಪಂಜಾಬಿನಲ್ಲಿ ಕಾಂಗ್ರೆಸ್  ಪಕ್ಷಕ್ಕೆ ಯಾವುದೇ  ಮೈತ್ರಿ ಅಗತ್ಯವಿಲ್ಲ, ಅಥವಾ ಯಾವುದೇ ಪಕ್ಷದೊಂದಿಗೂ ಮಾತುಕತೆ ನಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಮನ್ ಮೋಹನ್ ಸಿಂಗ್ ಅವರೊಂದಿಗೆ ಮಾತುಕತೆ ನಡೆಸಿದ್ದು,ಪಂಜಾಬಿನಲ್ಲಿ ಕಾಂಗ್ರೆಸ್ ಯೋಜನೆ ಕುರಿತಂತೆ ಅವರು ತಿಳಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಇಷ್ಟವಿಲ್ಲ ಎಂದು  ಸ್ಪಷ್ಟಪಡಿಸಿದ್ದಾರೆ ಎಂದು ಅಮರೀಂದರ್ ಸಿಂಗ್ ತಿಳಿಸಿದರು.

ಭಾನುವಾರ ದೆಹಲಿಯಲ್ಲಿ ಮನ್ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಪಂಜಾಬ್ ರಾಜ್ಯ ಉಸ್ತುವಾರಿ ಆಶಾ ಕುಮಾರಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಸುನೀಲ್ ಜಾಕಾರ್  ಅಮೃತಸರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಮನ್ ಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದರು.
ಆದರೆ, ವಯಸ್ಸಿನ ಕಾರಣದಿಂದಾಗಿ ಮನಮೋಹನ್ ಸಿಂಗ್ ಚುನಾವಣೆಗೆ ಸ್ಪರ್ಧಿಸಲು ಮನಸ್ಸು ಮಾಡುತ್ತಿಲ್ಲ ಎಂಬ ವರದಿಗಳು  ಕೇಳಿಬಂದಿವೆ.
SCROLL FOR NEXT