ಸಂಗ್ರಹ ಚಿತ್ರ 
ದೇಶ

'ನಾನು ಪೊಲೀಸ್ ಕಮಿಷನರ್ ಮಗ' ಎಂದು ಧಿಮಾಕಿನಿಂದ ಹೇಳಿದ್ದ ಯುವಕ ಪರಿಕ್ಕರ್ ನೀಡಿದ್ದ ಉತ್ತರಕ್ಕೆ ಪತರುಗುಟ್ಟಿದ್ದ!

ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..

ಪಣಜಿ: ಮಾಜಿ ಕೇಂದ್ರ ಸಚಿವ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತಮ್ಮ ಸರಳತೆಯ ಮೂಲಕವೇ ಹೆಸರಾಗಿದ್ದವರು. ಅವರು ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..
ಹೌದು.. ಹಿಂದೊಮ್ಮೆ ಪರಿಕ್ಕರ್ ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳಿದ್ದ ಮನೋಹರ್ ಪರಿಕ್ಕರ್ ಅವರು ಸಣ್ಣ ಅಪಘಾತಕ್ಕೀಡಾಗಿದ್ದರು. ಈ ವೇಳೆ ಪರಿಕ್ಕರ್ ಸ್ಕೂಟಿಗೆ ಗುದ್ದಿದ ಐಶಾರಾಮಿ ಕಾರಿನಲ್ಲಿದ್ದ ಯುವಕ ಕೂಡಲೇ ಕೆಳಗೆ ಇಳಿದು ಬಂದುದ ಪರಿಕ್ಕರ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಧಿಮಾಕಿನಿಂದ ತಾನು ಯಾರು ಎಂದು ನಿನಗೆ ಗೊತ್ತೇ.. ನಾನು ಗೋವಾ ಪೊಲೀಸ್ ಕಮಿಷನರ್ ಅವರ ಮಗ ಎಂದು ಧಿಮಾಕಿನಿಂದ ಹೇಳಿದ್ದ.
ಈ ವೇಳೆ ಯುವಕನ ಧಿಮಾಕಿಗೆ ಅಷ್ಟೇ ಸರಳವಾಗಿ ಉತ್ತರಿಸಿದ್ದ ಪರಿಕ್ಕರ್ ಅವರು, ನಾನು ಯಾರು ಗೊತ್ತಾ.. ಗೋವಾ ಸಿಎಂ ಎಂದು ಸಣ್ಣ ಧನಿಯಲ್ಲಿ ಹೇಳಿದ್ದರು. ಈ ವೇಳೆ ಧಿಮಾಕು ತೋರಿದ್ದ ಯುವಕ ಪತರುಗುಟ್ಟು ಹೋಗಿದ್ದ.
ಇಷ್ಟೇ ಅಲ್ಲ ಪರಿಕ್ಕರ್ ಅವರ ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ಘಟಿಸಿವೆ. ಪರಿಕ್ಕರ್ ಅವರಿಗೆ ಸ್ಕೂಟಿ ಚಲಾಯಿಸುವುದು ಎಂದರೆ ಬಹಳ ಇಷ್ಟವಂತೆ. ಆದರೆ ಇಂತಹ ಸ್ಕೂಟಿ ಚಲಾಯಿಸುವುದನ್ನೇ ಅವರು ತೊರೆದಿದ್ದರು. ಕಾರಣ ಅವರ ಕೆಲಸ...
ಹೌದು.. ಈ ಹಿಂದೆ ಕನಕೋನದಲ್ಲಿ ನಡೆದ ಕಾರ್ಯಾಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಾನು ಸ್ಕೂಟಿ ಡ್ರೈವಿಂಗ್ ಬಿಟ್ಟಿದ್ದೇನೆ. ನನ್ನ ತಲೆತುಂಬ ನಾನು ಮಾಡಬೇಕಾದ ಕೆಲಸಗಳೇ ತುಂಬಿರುತ್ತವೆ. ನಾನು ಗಾಡಿ ಚಲಾಯಿಸುವಾಗಲೂ ಆ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಹೀಗಾಗಿ ನನ್ನ ಕೆಲಸದ ಮೇಲಿನ ಗಮನದಿಂದ ನಾನು ಗಾಡಿ ಚಲಾಯಿಸಿ ನನಗೂ ಮತ್ತೊಬ್ಬರಿಗೂ ಹಾನಿ ಮಾಡುವುದು ಇಷ್ಟವಿಲ್ಲ. ಹೀಗಾಗಿ ಬೈಕ್ ಚಲಾಯಿಸುವುದನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ?

ಮಂಗಳೂರು: Muslim ಕ್ಯಾಬ್ ಚಾಲಕನಿಗೆ 'ಭಯೋತ್ಪಾದಕ' ಎಂದು ಕರೆದಿದ್ದ ಕೇರಳ ನಟನ ಬಂಧನ!

ಅಯೋಧ್ಯೆಯಲ್ಲಿ ಮತ್ತೊಂದು 'ನಿಗೂಢ' ಸ್ಫೋಟ: ಸಾವಿನ ಸಂಖ್ಯೆ 6ಕ್ಕೆ ಏರಿಕೆ, Video Viral

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

SCROLL FOR NEXT