ಸಂಗ್ರಹ ಚಿತ್ರ 
ದೇಶ

'ನಾನು ಪೊಲೀಸ್ ಕಮಿಷನರ್ ಮಗ' ಎಂದು ಧಿಮಾಕಿನಿಂದ ಹೇಳಿದ್ದ ಯುವಕ ಪರಿಕ್ಕರ್ ನೀಡಿದ್ದ ಉತ್ತರಕ್ಕೆ ಪತರುಗುಟ್ಟಿದ್ದ!

ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..

ಪಣಜಿ: ಮಾಜಿ ಕೇಂದ್ರ ಸಚಿವ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತಮ್ಮ ಸರಳತೆಯ ಮೂಲಕವೇ ಹೆಸರಾಗಿದ್ದವರು. ಅವರು ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..
ಹೌದು.. ಹಿಂದೊಮ್ಮೆ ಪರಿಕ್ಕರ್ ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳಿದ್ದ ಮನೋಹರ್ ಪರಿಕ್ಕರ್ ಅವರು ಸಣ್ಣ ಅಪಘಾತಕ್ಕೀಡಾಗಿದ್ದರು. ಈ ವೇಳೆ ಪರಿಕ್ಕರ್ ಸ್ಕೂಟಿಗೆ ಗುದ್ದಿದ ಐಶಾರಾಮಿ ಕಾರಿನಲ್ಲಿದ್ದ ಯುವಕ ಕೂಡಲೇ ಕೆಳಗೆ ಇಳಿದು ಬಂದುದ ಪರಿಕ್ಕರ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಧಿಮಾಕಿನಿಂದ ತಾನು ಯಾರು ಎಂದು ನಿನಗೆ ಗೊತ್ತೇ.. ನಾನು ಗೋವಾ ಪೊಲೀಸ್ ಕಮಿಷನರ್ ಅವರ ಮಗ ಎಂದು ಧಿಮಾಕಿನಿಂದ ಹೇಳಿದ್ದ.
ಈ ವೇಳೆ ಯುವಕನ ಧಿಮಾಕಿಗೆ ಅಷ್ಟೇ ಸರಳವಾಗಿ ಉತ್ತರಿಸಿದ್ದ ಪರಿಕ್ಕರ್ ಅವರು, ನಾನು ಯಾರು ಗೊತ್ತಾ.. ಗೋವಾ ಸಿಎಂ ಎಂದು ಸಣ್ಣ ಧನಿಯಲ್ಲಿ ಹೇಳಿದ್ದರು. ಈ ವೇಳೆ ಧಿಮಾಕು ತೋರಿದ್ದ ಯುವಕ ಪತರುಗುಟ್ಟು ಹೋಗಿದ್ದ.
ಇಷ್ಟೇ ಅಲ್ಲ ಪರಿಕ್ಕರ್ ಅವರ ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ಘಟಿಸಿವೆ. ಪರಿಕ್ಕರ್ ಅವರಿಗೆ ಸ್ಕೂಟಿ ಚಲಾಯಿಸುವುದು ಎಂದರೆ ಬಹಳ ಇಷ್ಟವಂತೆ. ಆದರೆ ಇಂತಹ ಸ್ಕೂಟಿ ಚಲಾಯಿಸುವುದನ್ನೇ ಅವರು ತೊರೆದಿದ್ದರು. ಕಾರಣ ಅವರ ಕೆಲಸ...
ಹೌದು.. ಈ ಹಿಂದೆ ಕನಕೋನದಲ್ಲಿ ನಡೆದ ಕಾರ್ಯಾಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಾನು ಸ್ಕೂಟಿ ಡ್ರೈವಿಂಗ್ ಬಿಟ್ಟಿದ್ದೇನೆ. ನನ್ನ ತಲೆತುಂಬ ನಾನು ಮಾಡಬೇಕಾದ ಕೆಲಸಗಳೇ ತುಂಬಿರುತ್ತವೆ. ನಾನು ಗಾಡಿ ಚಲಾಯಿಸುವಾಗಲೂ ಆ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಹೀಗಾಗಿ ನನ್ನ ಕೆಲಸದ ಮೇಲಿನ ಗಮನದಿಂದ ನಾನು ಗಾಡಿ ಚಲಾಯಿಸಿ ನನಗೂ ಮತ್ತೊಬ್ಬರಿಗೂ ಹಾನಿ ಮಾಡುವುದು ಇಷ್ಟವಿಲ್ಲ. ಹೀಗಾಗಿ ಬೈಕ್ ಚಲಾಯಿಸುವುದನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT