ದಲೈಲಾಮರ ಭಾರತದ ಉತ್ತರಾಧಿಕಾರಿಯನ್ನು ಅಂಗೀಕರಿಸುವುದಿಲ್ಲ: ಚೀನಾ! 
ದೇಶ

ದಲೈಲಾಮರ ಭಾರತದ ಉತ್ತರಾಧಿಕಾರಿಯನ್ನು ಅಂಗೀಕರಿಸುವುದಿಲ್ಲ: ಚೀನಾ!

ಭಾರತದಿಂದಲೇ ನನ್ನ ಉತ್ತರಾಧಿಕಾರಿಯ ಆಗಮನವಾಗಬಹುದು ಎಂಬ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮ ಅವರ ಹೇಳಿಕೆಗೆ ಚೀನಾ ಪರೀಕ್ಷವಾಗಿ ಪ್ರತಿಕ್ರಿಯೆ ನೀಡಿದೆ.

ಬೀಜಿಂಗ್: ಭಾರತದಿಂದಲೇ ನನ್ನ ಉತ್ತರಾಧಿಕಾರಿಯ ಆಗಮನವಾಗಬಹುದು ಎಂಬ ಟಿಬೆಟ್ ಬೌದ್ಧ ಧರ್ಮಗುರು ದಲೈಲಾಮ ಅವರ ಹೇಳಿಕೆಗೆ ಚೀನಾ ಪರೀಕ್ಷವಾಗಿ ಪ್ರತಿಕ್ರಿಯೆ ನೀಡಿದೆ. 
ದಲೈಲಾಮ ಉತ್ತರಾಧಿಕಾರಿಯೇನಾದರೂ ಭಾರತೀಯ ಮೂಲದವರಾಗಿದ್ದರೆ ಅವರನ್ನು ಅಂಗೀಕರಿಸುವುದಿಲ್ಲ ಎಂಬ ಸುಳಿವನ್ನು ಚೀನಾ ನೀಡಿದೆ. 
ಟಿಬೆಟ್ ನ 14 ನೇ ಧರ್ಮಗುರು ದಲೈ ಲಾಮ, 1959 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಚೀನಾ ಅವರನ್ನು ಅತ್ಯಂತ ಅಪಾಯಕಾರಿ  ಪ್ರತ್ಯೇಕತಾವಾದಿ ಎಂದೇ ಪರಿಗಣಿಸುತ್ತಿದ್ದು, ದಲೈ ಲಾಮ ಉತ್ತರಾಧಿಕಾರಿ ಬಗ್ಗೆ ಈಗ ತಲೆಕೆಡಿಸಿಕೊಂಡಿದೆ. 
ರಾಯಟರ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದಲೈಲಾಮ ತಮ್ಮ ಉತ್ತರಾಧಿಕಾರಿ ಬಗ್ಗೆ ಮಾತನಾಡಿದ್ದರು. ಚೀನಾ ಸಧ್ಯದ ಪರಿಸ್ಥಿತಿಯಲ್ಲಿ ನನಗಿಂತ ನನ್ನ ಉತ್ತರಾಧಿಕಾರಿಯ ಬಗ್ಗೆಯೇ ಹೆಚ್ಚು ಆತಂಕಗೊಂಡಿದೆ. ನನ್ನ ಉತ್ತರಾಧಿಕಾರಿ ಭಾರತದಿಂದಲೂ ಆಗಮಿಸಬಹುದು ಅಂತಹ ಸಂದರ್ಭದಲ್ಲಿ ಚೀನಾ ಸಹ ಓರ್ವ ದಲೈ ಲಾಮಾನನ್ನು ನೇಮಕ ಮಾಡುತ್ತದೆ. ಚೀನಾದಿಂದ ಆಯ್ಕೆಯಾದ ದಲೈಲಾಮನನ್ನು ಯಾರೂ ನಂಬುವುದಿಲ್ಲ ಎಂದು ದಲೈಲಾಮ ಹೇಳಿದ್ದರು. 
ಚೀನಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ದಲೈಲಾಮ ಅವರ ಅವತಾರ ಚೀನಾದ ಕಾನೂನು, ನಿಯಂತ್ರಣ ಹಾಗೂ ಧಾರ್ಮಿಕ ವಿಧಾನಗಳನ್ನು ಅನುಸರಿಸಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಈ ಮೂಲಕ ಭಾರತದಿಂದ ಆಯ್ಕೆಯಾಗುವ ದಲೈಲಾಮಾ ಅವರನ್ನು ತಾನು ಅಂಗೀಕರಿಸುವುದಿಲ್ಲ ಎಂಬ ಸುಳಿವು ನೀಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT