ಹಾರ್ದಿಕ್ ಪಟೇಲ್ 
ದೇಶ

'ಬೆರೋಜ್ಗರ್' ಟ್ವಿಟರ್ ಖಾತೆ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್, ಚೌಕಿದಾರ್ ಮೋದಿಗೆ ಟಾಂಗ್!

ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.

ಅಹಮದಾಬಾದ್:  ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಗುಜರಾತಿನ ಪಟೇಲ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್,  ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ 'ಎಂದು ಬದಲಾಯಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ  ಜಾಲತಾಣಗಳಲ್ಲಿ ಆರಂಭಿಸಿರುವ ಮೈನ್ ಬೀ ಚೌಕಿದಾರ್ ಪ್ರಚಾರಾಂದೋಲನಕ್ಕೆ ಟಾಂಗ್ ನೀಡಿದ್ದಾರೆ.

 ಇತ್ತೀಚಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಾರ್ದಿಕ್ ಪಟೇಲ್, ತಮ್ಮ ಟ್ವಿಟರ್ ಖಾತೆಯನ್ನು 'ಬೆರೋಜ್ಗರ್ ಹಾರ್ದಿಕ್ ಪಟೇಲ್ 'ಎಂದು ಬದಲಾಯಿಸಿಕೊಂಡಿದ್ದಾರೆ. ಬೇರೊಜ್ಗರ್ ಎಂದರೆ ನಿರುದ್ಯೋಗಿ ಎಂದರ್ಥ.

ಪ್ರತಿಪಕ್ಷಗಳ ಚೌಕಿದಾರ್ ಚೋರ್ ಹೈ ಟೀಕೆಯನ್ನೇ ಅಸ್ತ್ರವನ್ನಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ' ಮೈನ್ ಬೀ ಚೌಕಿದಾರ್' ಎಂದು ಟ್ವಿಟರ್ ಖಾತೆಯನ್ನು ಬದಲಾಯಿಸಿಕೊಂಡಿದ್ದರು.

ಬಿಜೆಪಿ ಸಮಾವೇಶಗಳಲ್ಲಿ ತಮ್ಮನ್ನು ದೇಶ ಕಾಯುವ ಕಾವಲುಗಾರ ಎಂದು ಪ್ರಧಾನಿ ಮೋದಿ ಹೇಳಿಕೊಳ್ಳುತ್ತಿದ್ದರು. ಮೈನ್ ಬೀ ಪ್ರಚಾರಾಂದೋಲನದಲ್ಲಿ  ಬಿಜೆಪಿ ನಾಯಕರು, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ಎಂದು  ಸೇರ್ಪಡೆ ಮಾಡಿಕೊಂಡಿದ್ದರು.

ಈಗ ಇದಕ್ಕೆ ಟಾಂಗ್ ನೀಡುವ ನಿಟ್ಟಿನಲ್ಲಿ ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಬೆರೋಜ್ಗರ್  ಪ್ರಚಾರಾಂದೋಲನ ಆರಂಭಿಸಿದ್ದಾರೆ..
ಅನೇಕ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಟ್ವಿಟರ್ ನಲ್ಲಿ ಬೆರೋಜ್ಗರ್ ಎಂದು ಬದಲಾಯಿಸಿಕೊಂಡಿರುವುದಾಗಿ ಗುಜರಾತ್ ಕಾಂಗ್ರೆಸ್ ಐಟಿ ಘಟಕದ ಉಪಾಧ್ಯಕ್ಷ ಹಿರೇನ್ ಬ್ಯಾಂಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT