ಸಿಎಂ ಪ್ರಮೋದ್ ಸಾವಂತ್ 
ದೇಶ

ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದು, ನಮ್ಮ ಬಲ 14ಕ್ಕೆ ಏರಿದೆ: ಸಿಎಂ ಪ್ರಮೋದ್ ಸಾವಂತ್

ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.

ಪಣಜಿ: ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದರು.
ಎಂಜಿಪಿಯ ಇಬ್ಬರು ಶಾಸಕರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಾ ಸಿಎಂ ಪ್ರಮೋದ್ ಸಾವಂತ್, ಸ್ಥಿರ ಸರ್ಕಾರಕ್ಕಾಗಿ ಇಬ್ಬರು ಎಂಜಿಪಿ ಶಾಸಕರು ಬಿಜೆಪಿ ಸೇರಿದ್ದಾರೆ. ಆ ಮೂಲಕ ಗೋವಾ ವಿಧಾನಸಭೆಯಲ್ಲಿ ನಮ್ಮ ಬಲ 14ಕ್ಕೆ ಏರಿಕೆಯಾಗಿ ಎಂದು ಹೇಳಿದರು.
ಇದೇ ವಿಚಾರವಾಗಿ ಮಾತನಾಡಿದ ಗೋವಾ ಪ್ರವಾಸೋಧ್ಯಮ ಸಚಿವ ಮತ್ತು ಎಂಜಿಪಿ ಶಾಸಕ ಮನೋಹರ್ ಅಜ್ಗಾಂವ್ಕರ್ ಅವರು, ಖಂಡಿತಾ ಮುಂದಿನ ಬಾರಿಯೂ ಬಿಜೆಪಿಯೇ ಸರ್ಕಾರ ರಚನೆ ಮಾಡಲಿದ್ದು, ನಾವು ಎಲ್ಲಿಯೇ ಹೋದರು ಜನ ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಪ್ರಧಾನಿ ಮೋದಿ ಅವರಿಂದಾಗಿಯೇ ಬಿಜೆಪಿ ಪಕ್ಷ ಅಭೂತಪೂರ್ವ ಯಶಸ್ಸು ಸಾಧಿಸುತ್ತಿದೆ ಎಂದು ಹೇಳಿದರು. ಅಂತೆಯೇ ಬಿಜೆಪಿ ಸೇರ್ಪಡೆಯಾದ ತಮ್ಮ ನಿಲುವು ಸಮರ್ಥಿಸಿಕೊಂಡ ಅವರು ಓರ್ವ ದಲಿತನಾಗಿ ಎಂಜಿಪಿಯಲ್ಲಿ ನಾನು ಬೆಳೆಯುತ್ತೇನೆ ಎಂಬ ವಿಶ್ವಾಸ ನನಗಿಲ್ಲ. ಲಾವು ಮಮ್ಲೇದಾರ್ ಅವರಂತೆಯೇ ನನ್ನನ್ನೂ ಪಕ್ಷದಿಂದ ಕಿತ್ತು ಹಾಕಬಹುದು ಎಂದು ಹೇಳಿದರು.
ಬಿದೆಪಿ ಸೇರ್ಪಡೆಯಾದ ಮತ್ತೋರ್ವ ಶಾಸಕ ದೀಪತ್ ಪಾಸ್ಕರ್ ಅವರು ಮಾತನಾಡಿ, ನಾವು ನಿಜಕ್ಕೂ ಸಂತೋಷದಿಂದಲೇ ಬಿಜೆಪಿಗೆ ಸೇರ್ಪಡೆಯಾಗಿದ್ದೇವೆ. ಇಂದು ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಕಾರ್ಯಕ್ರಮವಿರಲಿದ್ದು, ಗೋವಾ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಿಎಂ ಪ್ರಮೋದ್ ಸಾವಂತ್ ಯಾವುದೇ ಇಲಾಖೆ ನೀಡಿದರು ಪ್ರಾಮಾಣಿಕವಾಗಿ ಅದನ್ನು ನಿಭಾಯಿಸುತ್ತೇವೆ ಎಂಜು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT