ದೇಶ

ಕೇವಲ ಕುರ್ಚಿಗಾಗಿ ಕಾರ್ಯಕರ್ತರ ಎದುರೆ ಬಡಿದಾಡಿಕೊಂಡ ಕಾಂಗ್ರೆಸ್ ನಾಯಕರು, ವಿಡಿಯೋ!

Vishwanath S
ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಪ್ರತಿಭಟನೆ ವೇಳೆ ಕೇವಲ ಕುರ್ಚಿಗಾಗಿ ಕಾಂಗ್ರೆಸ್ ನಾಯಕರು ವೇದಿಕೆಯಲ್ಲೇ ಬಡಿದಾಡಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕೇಂದ್ರ ಮಾಜಿ ಸಚಿವ ವಿ. ಹನುಮಂತರಾವ್ ಹಾಗೂ ಸ್ಥಳೀಯ ನಾಯಕ ನಾಗೇಶ್ ಮುದಿರಾಜ್ ವೇದಿಕೆಯಲ್ಲೇ ತಳ್ಳಾಡಿಕೊಂಡಿದ್ದಾರೆ. 
ರಾಜ್ಯ ಶಿಕ್ಷಣ ಮಂಡಳಿಯ ನೀತಿಯಿಂದಾಗಿ 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿ ವಿಪಕ್ಷಗಳು ಕೆಸಿಆರ್ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದವು.
ಪ್ರತಿಭಟನೆ ವೇಳೆ ಕುರ್ಚಿ ವ್ಯವಸ್ಥೆಗೊಳಿಸುವಲ್ಲಿ ಹನುಮಂತ್ ರಾವ್ ಹಾಗೂ ನಾಗೇಶ್ ನಡುವೆ ವಾಗ್ವಾದ ಉಂಟಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಕೈಕೈ ಮಿಲಾಯಿಸಿದ್ದಾರೆ. 
SCROLL FOR NEXT