ಧನೋವಾ 
ದೇಶ

ಕಾರ್ಗಿಲ್ ಯೋಧರ ಸ್ಮರಣಾರ್ಥ 'ಮಿಸ್ಸಿಂಗ್ ಮ್ಯಾನ್' ಫಾರ್ಮೇಷನ್, ಐಎಎಫ್ ಚೀಫ್ ಧನೋವಾ ನೇತೃತ್ವ

ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಇಂದು ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’ ರಚಿಸುವ ಮೂಲಕ ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ನವದೆಹಲಿ: ಭಾರತೀಯ ವಾಯು ಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್  ಬಿ.ಎಸ್. ಧನೋವಾ ಅವರ ಇಂದು ಇಲ್ಲಿನ ಭಿಸಿಯಾನ ವಾಯುನೆಲೆಯಲ್ಲಿ ಮಿಗ್ -21 ಯುದ್ಧ ವಿಮಾನದಲ್ಲಿ ‘ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್’  ರಚಿಸುವ ಮೂಲಕ  ಕಾರ್ಗಿಲ್ ನ ಸಫೇದ್ ಸಾಗರ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಪಶ್ಚಿಮ ಏರ್ ಕಮಾಂಡಿಂಗ್ ಇನ್ ಚೀಫ್ ಆರ್. ನಂಬಿಯಾರ್ ಈ ಕಸರತ್ತಿನ ಭಾಗವಾಗಿದ್ದರು. ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್, ಶಸ್ತ್ರಸಜ್ಜಿತರಾಗಿ ಹುತಾತ್ಮರಾದ ವೀರ ಯೋಧರಿಗೆ ನೀಡುವ ವೈಮಾನಿಕ ಶ್ರದ್ಧಾಂಜಲಿಯಾಗಿದೆ. ಇದರಲ್ಲಿ ಎರಡು ಯುದ‍್ದ ವಿಮಾನಗಳು ಆಗಸದಲ್ಲಿ ಹಾರಾಡಿ ಬಾಣದ ರೂಪ ಮೂಡಿಸುತ್ತವೆ. ಈ ಕಸರತ್ತಿಗೆ ಅಗತ್ಯವಿರುವ ಮೂರನೇ ಯುದ್ಧ ವಿಮಾನದ ಅನುಪಸ್ಥಿತಿಯೇ ‘ಮಿಸ್ಸಿಂಗ್  ಮ್ಯಾನ್’ ಫಾರ್ಮೇಷನ್ .
ಈ ಕಸರತ್ತಿನ ನಂತರ, ಧನೋವಾ ಅವರು ಕರ್ತವ್ಯದಲ್ಲಿದ್ದಾಗ ಪ್ರಾಣ ತ್ಯಾಗ ಮಾಡಿದ ಭಾರತೀಯ ವಾಯುಪಡೆಯ ಧೀರರ ಸ್ಮಾರಕಗಳಿಗೆ ಪುಷ್ಪನಮನ ಸಲ್ಲಿಸಿದರು. ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಧನೋವಾ ಅವರು 17ನೇ ಸ್ಕ್ವಾಡ್ರನ್ ನ ಯುದ್ಧ ವಿಮಾನದ ಫ್ಲೈಟ್ ಕಮಾಂಡರ್ ಆಗಿದ್ದರು.
ಮೇ 28ರಂದು ಧನೋವಾ ಅವರು ಸರ್ಸಾವ ವಾಯುನೆಲೆಗೆ ಭೇಟಿ ನೀಡಿ ಎಂಐ-17 ವಿ5 ಯುದ್ಧ ವಿಮಾನ ಚಲಾಯಿಸಿ, ಮತ್ತೊಮ್ಮೆ ಮಿಸ್ಸಿಂಗ್ ಮ್ಯಾನ್ ಫಾರ್ಮೇಷನ್  ಮೂಲಕ ಕಾರ್ಗಿಲ್ ಮೃತ ಯೋಧರಿಗೆ ಗೌರವ ಸಲ್ಲಿಸಲಿದ್ದಾರೆ.
1999ರ ಮೇ 28ರಂದು ಡ್ರಾಸ್ ವಲಯದಲ್ಲಿ ಭಾರತೀಯ ವಾಯುಪಡೆ ಎಂಐ-17  ಅನ್ನು ಕಳೆದುಕೊಂಡಿತು. ಅದರಲ್ಲಿ ಸ್ಕ್ವಾಡ್ರನ್ ಲೀಡರ್ ಆರ್. ಪುಂದಿರ್, ಫ್ಲೈಟ್ ಲೆಫ್ಟಿನೆಂಟ್ ಸ್ಕ್ವಾಡ್ರನ್ ಮಹಿಲನ್, ಸರ್ಜೆಂಟ್ ಆರ್. ಕೆ. ಸಹು ಹಾಗೂ ಸರ್ಜೆಂಟ್ ಪಿವಿಎನ್ ಆರ್. ಪ್ರಸಾದ್ ಮೃತಪಟ್ಟಿದ್ದರು ಎಂದು ಭಾರತೀಯ ವಾಯುಪಡೆಯ ವಕ್ತಾರರು ತಿಳಿಸಿದ್ದಾರೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Eiffel Tower ಇನ್ನು ನೆನಪು ಮಾತ್ರ?: ಪ್ರಸಿದ್ಧ ಸ್ಮಾರಕ ಕೆಡವುತ್ತಿರುವ ಬಗ್ಗೆ ಟ್ಯಾಪಿಯೋಕಾ ಟೈಮ್ಸ್ ಹೇಳಿದ್ದೇನು?

SCROLL FOR NEXT