ದೇಶ

ಪಾಟ್ನಾ: ಕಾರು ಅಪಘಾತದಲ್ಲಿ ಲಾಲು ಪುತ್ರ ತೇಜ್ ಪ್ರತಾಪ್ ಗೆ ಗಾಯ

Lingaraj Badiger
ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಅವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಅಪಘಾತಕ್ಕಿಡಾಗಿದ್ದು, ಘಟನೆಯಲ್ಲಿ ಲಾಲು ಪುತ್ರ ಹಾಗೂ ಅವರ ಬೆಂಬಲಿಗರೊಬ್ಬರು ಗಾಯಗೊಂಡಿದ್ದಾರೆ.
ಪಾಟ್ನಾದ ತಮ್ಮ ನಿವಾಸದಿಂದ ಪಕ್ಷದ ಕಚೇರಿಗೆ ತೆರಳುತ್ತಿದ್ದ ವೇಳೆ ಇಕೋ ಪಾರ್ಕ್ ತೇಜ್ ಪ್ರತಾಪ್ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ತೇಜ್ ಪ್ರತಾಪ್ ಅವರು ಮಾರುತಿ ಬ್ರೀಜ್ ಕಾರಿನಲ್ಲಿ ಇಬ್ಬರು ಸಹಾಯಕರೊಂದಿಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಎರಡು ವಾಹನಗಳು ನುಜ್ಜು ನುಜ್ಜಾಗಿವೆ. ತೇಜ್ ಪ್ರತಾಪ್ ಅವರ ಕಾಲಿಗೆ ಗಾಯಗಳಾಗಿದ್ದು, ಜೊತೆಗೆ ಅವರ ಬೆಂಬಲಿಗನ ತಲೆಗೆ ಪೆಟ್ಟಾಗಿದೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ತೇಜ್ ಪ್ರತಾಪ್ ಮತ್ತು ಇತರೆ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
SCROLL FOR NEXT