ದೇಶ

ಡಿವೈಎಫ್‌ಐ -ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ಘರ್ಷಣೆ-ತಿರುವನಂತಪುರ ಉದ್ವಿಗ್ನ 

Manjula VN

ತಿರುವನಂತಪುರ: ಕೇರಳ ರಾಜಧಾನಿಯಾದ ಇಲ್ಲಿ ಡಿವೈಎಫ್‌ಐ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯ ನಂತರ ಪೊಲೀಸರು ಸೇರಿದಂತೆ 12 ಜನರು ಗಾಯಗೊಂಡಿದ್ದಾರೆ.

ವಟ್ಟಿಯೂರ್ಕಾವ್‌ನ ಮಣಿಕಂಡೇಶ್ವರಂನಲ್ಲಿ ಧ್ವಜ ಕಂಬಗಳನ್ನು ನಿರ್ಮಿಸುವ ಕುರಿತು ಡಿವೈಎಫ್‌ಐ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಅದು, ಘರ್ಷಣೆಗೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ವಿ ವಿನೀತ್ ಮತ್ತು ರಾಜ್ಯ ಸಮಿತಿ ಸದಸ್ಯ ಪ್ರತಿನ್‌ಸಜ್ ಕೃಷ್ಣ ಕೂಡ ಗಾಯಗೊಂಡಿದ್ದಾರೆ.

SCROLL FOR NEXT