ಪೊಲೀಸ್ ಠಾಣೆಯ ಹತ್ತಿರವೆ ಮಹಿಳೆ ಮೇಲೆ ರೇಪ್ ಯತ್ನ, ಅತ್ಯಾಚಾರಿಯಿಂದ ರಕ್ಷಿಸಬೇಕಾದ ಸಾರ್ವಜನಿಕರಿಂದಲೇ ರೇಪ್! 
ದೇಶ

ಪೊಲೀಸ್ ಠಾಣೆಯ ಹತ್ತಿರವೆ ಮಹಿಳೆ ಮೇಲೆ ರೇಪ್ ಯತ್ನ, ಅತ್ಯಾಚಾರಿಯಿಂದ ರಕ್ಷಿಸಬೇಕಾದ ಸಾರ್ವಜನಿಕರಿಂದಲೇ ರೇಪ್!

ಪೊಲೀಸ್ ಠಾಣೆಯ ಹತ್ತಿರವೇ ಇದ್ದ ಪಾರ್ಕ್ ನಲ್ಲಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ. 

ನೋಯ್ಡಾ: ಪೊಲೀಸ್ ಠಾಣೆಯ ಹತ್ತಿರವೇ ಇದ್ದ ಪಾರ್ಕ್ ನಲ್ಲಿ 21 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ. 

ರಫ್ತಿ ಕಂಪನಿಯಲ್ಲಿ ಜವಾನ(ಪಿಯೋನ್) ನಾಗಿ ಕಾರ್ಯನಿರ್ವಹಿಸುತ್ತಿದ್ದ ರವಿ ಎಂಬಾತ ಮಹಿಳೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ದಾನೆ. ಈ ಬಗ್ಗೆ ಚರ್ಚಿಸುವುದಕ್ಕಾಗಿ ರಾತ್ರಿ 8:30ಕ್ಕೆ ಭೇಟಿ ಮಾಡುವಂತೆ ಹೇಳಿದ್ದಾನೆ. ಯುವತಿ ಅಲ್ಲಿ ತೆರಳಿದಾಗ ಆಕೆಯನ್ನು ಸೆಕ್ಟರ್ 63 ಯ ಪೊಲೀಸ್ ಠಾಣೆಯ ಬಳಿ ಇರುವ ಪಾರ್ಕ್ ಗೆ ಕರೆದೊಯ್ದು  ಯುವತಿ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ ಇದನ್ನು ಪ್ರತಿಭಟಿಸಿದ ಯುವತಿ ಕೂಗಿಕೊಂಡಿದ್ದಾಳೆ. ಇದನ್ನು ಕೇಳಿಸಿಕೊಂಡಾ ಹತ್ತಿರದಲ್ಲೇ ಇದ್ದ ಗುಡ್ಡು ಮತ್ತು ಶಾಮು ಸ್ಥಳಕ್ಕೆ ಧಾವಿಸಿ, ಅತ್ಯಾಚಾರವೆಸಗಲು ಯತ್ನಿಸುತ್ತಿದ್ದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ, ತಕ್ಷಣವೇ ರವಿ ಅಲ್ಲಿಂದ ಪರಾರಿಯಾಗಿದ್ದಾನೆ. ಆದರೆ ಯುವತಿಯನ್ನು ರಕ್ಷಿಸಬೇಕಿದ್ದ ಆ ಇಬ್ಬರು ಆಕೆಯನ್ನು ಮತ್ತೊಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ ಅಷ್ಟೇ ಅಲ್ಲದೇ ತಮ್ಮ ಇತರ ಮೂವರು ಸ್ನೇಹಿತರನ್ನೂ ಕರೆದಿದ್ದಾರೆ. ಪರಿಣಾಮ ಬ್ರಿಜ್ ಕಿಶೋರ್, ಪಿತಾಂಬರ್, ಉಮೇಶ್ ಎಂಬುವವರೂ ಆ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. 

ಸರಣಿ ಅತ್ಯಾಚಾರ ಹಾಗೂ ಹಲ್ಲೆಯಿಂದ ಯುವತಿಗೆ ರಕ್ತಸ್ರಾವವಾಗುತ್ತಿತ್ತು. ಆಕೆ ಹತ್ತಿರದಲ್ಲೇ ಇದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ಪ್ರಾಣ ಅಪಾಯದಿಂದ ಪಾರಾಗಿದ್ದಾಳೆ ಆದರೆ ನಡೆದಿರುವ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. 

ಅತ್ಯಾಚಾರವೆಸಗಿರುವ ಐವರ ಪೈಕಿ ಮೂವರನ್ನು ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ ರವಿ ಎಂಬಾತನನ್ನು ಬಂಧಿಸಲಾಗಿದ್ದು, ಗುಡ್ಡು, ಶಾಮುಗಾಗಿ ಪೊಲೀಸರು ಶೋಧಕಾರ್ಯಾಚರಣೆಯಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT