ಇಂದಿರಾಗಾಂಧಿ ಜತೆ ಆಟವಾಡುತ್ತಿರುವ ಪ್ರಿಯಾಂಕಾ ಗಾಂಧಿ (ಬಾಲ್ಯದ ಚಿತ್ರ) 
ದೇಶ

ನಾನು ತಿಳಿದ ಧೈರ್ಯಶಾಲಿ ಮಹಿಳೆಗಾಗಿ-ಅಜ್ಜಿ ಇಂದಿರಾ ಜನ್ಮದಿನಕ್ಕೆ ಕವಿತೆ ಅರ್ಪಣೆ ಮಾಡಿದ ಪ್ರಿಯಾಂಕಾ

ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 102ನೇ ಜನ್ಮದಿನದಂದು ಅವರಿಗೊಂದು ವಿಶೇಷ ಕವಿತೆಯನ್ನು ಸಮರ್ಪಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಅಜ್ಜಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 102ನೇ ಜನ್ಮದಿನದಂದು ಅವರಿಗೊಂದು ವಿಶೇಷ ಕವಿತೆಯನ್ನು ಸಮರ್ಪಿಸಿದ್ದಾರೆ.

ನಾನು ತಿಳಿದಿರುವ ಧೈರ್ಯಶಾಲಿ ಮಹಿಳೆಯ ನೆನಪಿಗಾಗಿ ಎಂದು ಟಿಪ್ಪಣಿ ನೀಡಿರುವ ಪ್ರ್ಯಾಂಕಾ ವಿಲಿಯಂ ಅರ್ನೆಸ್ಟ್ ಹೆನ್ಲಿಯವರ ಇನ್ವಿಕ್ಟಸ್ ಎಂಬ ಕವನವನ್ನು ಉಲ್ಲೇಖಿಸಿದ್ದಾರೆ.

ಕವಿತೆಯ ಜೊತೆಗೆ, ಪ್ರಿಯಾಂಕಾ ಇಂದಿರಾಗಾಂಧಿ ಅವರೊಂದಿಗೆ ಆಡುವ ತನ್ನ ಬಾಲ್ಯದ ಕಪ್ಪು ಬಿಳುಪು ಭಾವಚಿತ್ರವನ್ನೂ ಸಹ ಪೋಸ್ಟ್ ಮಾಡಿದ್ದಾರೆ.

ಇನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ತಮ್ಮ ಅಜ್ಜಿಯ ಹುಟ್ಟುಹಬ್ಬದಂದು ಅವರಿಗೆ ಗೌರವ ಸೂಚಿಸಿದ್ದು "ಬಲವಾದ, ಸಮರ್ಥ ನಾಯಕತ್ವ ಮತ್ತು ಅದ್ಭುತ ನಿರ್ವಹಣಾ ಕೌಶಲ್ಯದಿಂದ ಕೂಡಿದ್ದ ಉಕ್ಕಿನ ಮಹಿಳೆ, ನನ್ನ ಪ್ರೀತಿಯ ಅಜ್ಜಿ ಇಂದಿರಾ ಗಾಂಧಿ ಭಾರತವನ್ನು ಪ್ರಬಲ ದೇಶವಾಗಿ ಮಾಡುವಲ್ಲಿ ಮುಖ ಪಾತ್ರ ವಹಿಸಿದ್ದಾರೆ. ಅವರ ಜನ್ಮದಿನಾಚರಣೆಯಂದು ನಾನು ಗೌರವ ಸಲ್ಲಿಸುತ್ತೇನೆ" ಎಂದು ಟ್ವಿಟ್ತರ್ ನಲ್ಲಿ ಸ್ಮರಿಸಿದ್ದಾರೆ.

ಇಂದು ಮುಂಜಾನೆಯೇ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಮತ್ತಿತರರೌ ದಿವಂಗತ ನಾಯಕಿಗೆ ಗೌರವ ನಮನ ಸಲ್ಲಿಸಿದ್ದರು.

ಸಂಸತ್ತಿನಲ್ಲಿ ಮಾಜಿ ಪ್ರಧಾನ ಮಂತ್ರಿಯ ಭಾವಚಿತ್ರಕ್ಕೆ ಹೂಮಾಲೆ ಹಾಕಿದ್ದರೆ ಕಾಂಗ್ರೆಸ್ ನಾಯಕರು ಅವರಿಗೆ ಪುಷ್ಪನಮನ ಸಲ್ಲಿಸಿದ್ದರು.

ನವೆಂಬರ್ 19, 1917 ರಂದು ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಮತ್ತು ಕಮಲಾ ನೆಹರೂ ದಂಪತಿಗೆ ಜನಿಸಿದ ಇಂದಿರಾ ಗಾಂಧಿ ದೇಶದ ಮೊದಲ ಮತ್ತು ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿ ಜನವರಿ 1966 ರಿಂದ ಮಾರ್ಚ್ 1977 ರವರೆಗೆ ಮತ್ತು 1980 ರ ಜನವರಿಯಿಂದ 1984 ರ ಅಕ್ಟೋಬರ್‌ನಲ್ಲಿ ಅವರ ಹತ್ಯೆ ನಡೆಯುವವರೆಗೆ ದೇಶಸೇವೆ ಮಾಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT