ದೇಶ

ಜಾರ್ಖಂಡ್ ರೈತರಿಗೆ ಮೊಬೈಲ್ ಪೋನ್ : ಬಿಜೆಪಿ ಚುನಾವಣಾ ಭರವಸೆ

Nagaraja AB

ರಾಂಚಿ:  ರೈತರಿಗೆ ಸುಲಭ ಪಾವತಿಯ ಅವಕಾಶದೊಂದಿಗೆ 3 ಲಕ್ಷರೂ.ವರೆಗೆ ಸಾಲ,  ಮೊಬೈಲ್ ಹ್ಯಾಂಡ್ ಸೆಟ್ ಸೇರಿದಂತೆ ಮತ್ತಿತರ ಭರವಸೆವನ್ನೊಳಗೊಂಡ  ಚುನಾವಣಾ ಪ್ರಣಾಳಿಕೆಯನ್ನು ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ಮುಖಂಡ ರವಿ ಶಂಕರ್ ಪ್ರಸಾದ್ ಇಂದು ಬಿಡುಗಡೆ ಮಾಡಿದರು.

ಬಿಪಿಎಲ್ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ಒದಗಿಸುವುದಾಗಿ ಶಪಥ ಮಾಡಿರುವ ಬಿಜೆಪಿ, ಒಂದು ವೇಳೆ ಮರಳಿ ಅಧಿಕಾರಕ್ಕೆ ಬಂದರೆ, ಶಾಲೆಗೆ ಹೋಗುತ್ತಿರುವ ಹಿಂದುಳಿದ ಮತ್ತು ಬಡ ಕುಟುಂಬಗಳ ಶಾಲಾ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ಒದಗಿಸುವುದಾಗಿ ಭರವಸೆ ನೀಡಿದೆ.

9 ಮತ್ತು  10ನೇ ತರಗತಿ ವಿದ್ಯಾರ್ಥಿಗಳಿಗೆ 2, 200 ಹಾಗೂ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ 7.500 ಸ್ಕಾಲರ್ ಷಿಪ್ ನೀಡುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ರಾಂಚಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ರಘುಬರ್ ದಾಸ್,  ಕೇಂದ್ರ ಬುಡಕಟ್ಟು ಸಚಿವ ಅರ್ಜುನ್ ಮುಂಡಾ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ಲಕ್ಷ್ಮಣ್ ಗಿಲುವಾ ಪಾಲ್ಗೊಂಡಿದ್ದರು.

SCROLL FOR NEXT