ದೇಶ

ರಾಷ್ಟ್ರೀಯ ನಾಯಕರಿಲ್ಲದ ಬಿಜೆಪಿ, ಆರ್'ಎಸ್ಎಸ್'ನಿಂದ ಗಾಂಧೀಜಿ, ಪಟೇಲರ ಸ್ವಾಧೀನ: ದಿಗ್ವಿಜಯ್ ಸಿಂಗ್

Manjula VN

ನವದೆಹಲಿ: ತಮ್ಮಲ್ಲಿ ರಾಷ್ಟ್ರೀಯ ನಾಯಕರಿಲ್ಲದ ಕಾರಣ ಬಿಜೆಪಿ ಹಾಗೂ ಆರ್'ಎಸ್ಎಸ್ ಸರ್ದಾರ್ ಪಟೇಲ್, ಮಹಾತ್ಮ ಗಾಂಧಿ ಹಾಗೂ ಬಿಆರ್ ಅಂಬಡ್ಕರ್ ರಂತಹ ನಾಯಕರನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಭಾನುವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ದಿಗ್ವಿಜಯ್ ಸಿಂಗ್ ಅವರು, ಆರ್ಎಸ್ಎಸ್ ಸಂಸ್ಥಾಪಕ ಕೆ.ಬಿ.ಹೆಡ್ಗೆವಾರ್ ಅವರೊಂದಿಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಹೊಂದಿಕೊಳ್ಳಲಿಲ್ಲವೇಕೆ?. ಹೆಡ್ಗೆವಾರ್ ಜೊತೆಗೆ ಗಾಂಧೀಜಿ, ಅಂಬೇಡ್ಕರ್ ಕೈಜೋಡಿಸದ ಕಾರಣ ಇದೀಗ ಬಿಜೆಪಿ ಹಾಗೂ ಆರ್'ಎಸ್ಎಸ್ ನಾಯಕರು ಸರ್ದಾರ್ ಪಟೇಲ್, ಅಂಬೇಡರ್, ಗಾಂಧೀಜಿಯವರನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ. 

ಇದಲ್ಲದೇ, ಬಿಜೆಪಿ ಹಾಗೂ ಬಜರಂಗ ದಳದವರ ಮೇಲೆ ಗಂಭೀರವಾದ ಆರೋಪ ಮಾಡಿರುವ ದಿಗ್ವಿಜಯ್ ಸಿಂಗ್ ಅವರು ಬಜರಂಗ ದಳ ಹಾಗೂ ಬಿಜೆಪಿ ಕಚೇರಿಯಲ್ಲಿರುವ ಕೆಲವರು ಪಾಕಿಸ್ತಾನ ಹಾಗೂ ಐಎಸ್ಐಗೆ ಪರ ಬೇಹುಗಾರಿಕೆ ಮಾಡುತ್ತಿದ್ದವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಇದೀಗ ಅವರು ಜಾಮೀನಿನ ಮೇಲೆ ಹೊರಗಿದ್ದಾರೆಂದಿದ್ದಾರೆ. 

SCROLL FOR NEXT