ಸಿಂಹದೊಂದಿಗೆ ವ್ಯಕ್ತಿ 
ದೇಶ

ಎದೆ ಝೆಲ್ಲೆನಿಸುವ ಘಟನೆ: ಸಿಂಹವಿದ್ದ ಜಾಗಕ್ಕೆ ಹಾರಿ ಮುಖಾಮುಖಿಯಾಗಿ ಕುಳಿತ ವ್ಯಕ್ತಿ!ಮುಂದೆನಾಯ್ತು ವಿಡಿಯೋ 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎದೆ ಝೆಲ್ಲೆನಿಸುವ ಘಟನೆಯೊಂದು ಇಂದು ನಡೆದಿದೆ. ಮೃಗಾಲಯದ ಸಿಂಹದ ಪಂಜರದೊಳಗೆ ಮಾನಸಿಕ ವ್ಯಕ್ತಿಯೊಬ್ಬ ಹಾರಿದ್ದಾನೆ. ನಂತರ ಅದರ ಬಳಿಗೆ ಹೋಗಿ ಮುಖಾಮುಖಿಯಾಗಿ ಕುಳಿತಿದ್ದಾನೆ.

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎದೆ ಝೆಲ್ಲೆನಿಸುವ ಘಟನೆಯೊಂದು ಇಂದು ನಡೆದಿದೆ. ಮೃಗಾಲಯದ ಸಿಂಹದ ಪಂಜರದೊಳಗೆ ಮಾನಸಿಕ ವ್ಯಕ್ತಿಯೊಬ್ಬ ಹಾರಿದ್ದಾನೆ. ನಂತರ ಅದರ ಬಳಿಗೆ ಹೋಗಿ ಮುಖಾಮುಖಿಯಾಗಿ ಕುಳಿತಿದ್ದಾನೆ.

ಬಿಹಾರ ಮೂಲದ ರೆಹಾನ್ ಖಾನ್ (28) ಈ ರೀತಿಯ ಹುಚ್ಚು ಸಾಹಸ ಮಾಡಿದ್ದು, ಆತ ಮಾನಸಿಕ ಅಸ್ವಸ್ಥ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃಗಾಲಯಕ್ಕೆ ಬಂದಿದ್ದ ರೆಹಾನ್ ಖಾನ್ ಸಿಂಹವಿದ್ದ ಜಾಗ ಪ್ರವೇಶಿಸಿದ್ದಾನೆ.  ಅಲ್ಲದೇ ಸಿಂಹದ ಎದುರಿಗೆ ಹೋಗಿ ಕುಳಿತಿದ್ದಾನೆ. ಹೀಗೆ ತನ್ನ ಹತ್ತಿರ ಬಂದ ರೆಹಾನ್ ನನ್ನು ಸಿಂಹ ಕೆಲ ಕಾಲ ದಿಟ್ಟಿಸಿ ನೋಡಿದೆ. ಅಷ್ಟೊತ್ತಿಗೆ ಆತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಿಂಹಕ್ಕೆ ಅರಿವಳಿಕೆ ನೀಡಿ ರೆಹಾನ್ ಖಾನ್ ನನ್ನು ರಕ್ಷಿಸಲಾಗಿದೆ. ಯಾವುದೇ ಅಪಾಯವಿಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಆತನನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT