ಸಂಗ್ರಹ ಚಿತ್ರ 
ದೇಶ

ವಾಹನ ವಿಮೆ ನವೀಕರಣ ಮಾಡಿಸಬೇಕೇ? ದುಬಾರಿ ದಂಡದ ಜೊತೆಗೆ ಸವಾರರಿಗೆ ಮತ್ತೊಂದು ಆಘಾತ!

ನೂತನ ಸಂಚಾರಿ ನಿಯಮಗಳ ಜಾರಿಯಿಂದಾಗಿ ದುಬಾರಿ ದಂಡ ಕಟ್ಟಲಾಗದೇ ಹೈರಾಣಾಗಿರುವ ವಾಹನ ಮಾಲೀಕರಿಗೆ ಮತ್ತೊಂದು ಆಘಾತ ಕಾದಿದೆ.

ನವದೆಹಲಿ: ನೂತನ ಸಂಚಾರಿ ನಿಯಮಗಳ ಜಾರಿಯಿಂದಾಗಿ ದುಬಾರಿ ದಂಡ ಕಟ್ಟಲಾಗದೇ ಹೈರಾಣಾಗಿರುವ ವಾಹನ ಮಾಲೀಕರಿಗೆ ಮತ್ತೊಂದು ಆಘಾತ ಕಾದಿದೆ.

ಮೋಟಾರು ವಾಹನ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ದುಬಾರಿ ದಂಡಕ್ಕೆ ದೇಶದ ಜನತೆ ಬೆಚ್ಚಿ ಬೀಳುತ್ತಿರುವ ಸಮಯದಲ್ಲೇ ವಾಹನ ಸವಾರರಿಗೆ ಮತ್ತೊಂದು ಆಘಾತ ಕಾದಿದೆ. ಇನ್ನು ಮುಂದೆ ವಾಹನ ವಿಮಾ ಪ್ರೀಮಿಯಂ ಸಹ ಸಂಚಾರ ನಿಯಮ ಉಲ್ಲಂಘನೆಗೆ ಲಿಂಕ್ ಆಗಲಿದೆ. ಅದರಂತೆ ಇನ್ನು ಮುಂದೆ ವಾಹನ ಚಾಲಕರು ಹೆಚ್ಚೆಚ್ಚು ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದರೆ, ಅವರ ವಾಹನದ ಮುಂದಿನ ವಿಮೆ ನವೀಕರಣ ಸಂದರ್ಭದಲ್ಲಿ ಅವರಿಗೆ ದಂಡ ಹಾಕುವ ಕುರಿತು ವಿಮಾ ಸಂಸ್ಥೆಗಳು ಗಂಭೀರ ಚಿಂತನೆಯಲ್ಲಿವೆ.

ಅದರಂತೆ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ವಾಹನಗಳ ವಿಮೆ ಪ್ರೀಮಿಯಂ ಸಹ ಸವಾರನ ಸಂಚಾರ ನಿಯಮ ಉಲ್ಲಂಘನೆಗೆ ಪ್ರಕರಣಗಳಿಗೆ ಜೋಡಿಸುವ ಚೌಕಟ್ಟು ರೂಪಿಸಲು 9 ಸದಸ್ಯರ ಸಮಿತಿ ರಚಿಸಿ, ಎರಡು ತಿಂಗಳ ಒಳಗೆ ವರದಿ ಸಲ್ಲಿಸುವಂತೆ  ಸೂಚಿಸಲಾಗಿದೆ. ದೆಹಲಿಯಲ್ಲಿ ಸಂಚಾರ ನಿರ್ವಹಣೆ ಹೊಣೆ ಹೊತ್ತ  ಗೃಹ ಕಾರ್ಯದರ್ಶಿ ಗೃಹ ಕಾರ್ಯದರ್ಶಿಗಳ ಅಧೀನದ ಉನ್ನತಾಧಿಕಾರದ ಸಮಿತಿಯ ಶಿಫಾರಸಿನ ಮೇರೆಗೆ ಈ ಸಮಿತಿ ರಚಿಸಲಾಗಿದೆ.

ಐಆರ್ ಡಿಎ ಸಮಿತಿ ವಾಹನ ವಿಮೆ ಪ್ರೀಮಿಯಂ ಮೊತ್ತ ಹಾಗೂ ಸಂಚಾರ ನಿಯಮ ಉಲ್ಲಂಘನೆಯನ್ನು ಜೋಡಿಸುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಿದೆ. ಶೀಘ್ರವೇ ಇದು ರಾಜಧಾನಿ ದೆಹಲಿಯಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೆ ಬರಲಿದೆ. ತದನಂತರ ಇದು ದೇಶದ ಬೇರೆ ಬೇರೆ ನಗರಕ್ಕೂ ಈ ವ್ಯವಸ್ಥೆ ಬರಲಿದೆ ಎಂದೂ ಹೇಳಲಾಗುತ್ತಿದೆ.

ಇಷ್ಟಕ್ಕೂ ಏನಿದು ಯೋಜನೆ?
ಪ್ರಸ್ತುತ ಎಲ್ಲ ವಾಹನಗಳಿಗೂ ವಿಮೆ ಕಡ್ಡಾಯ. ವಿಮೆಯ ದಿನಾಂಕ ಮುಕ್ತಾಯವಾಗಿದ್ದರೆ ಅದಕ್ಕೆ ದಂಡ ಕಟ್ಟುವುದು ಹಳೆಯ ಕಾನೂನು. ಆದರೆ ನೂತನ ನಿಯಮದ ಅನ್ವಯ ಇನ್ನು ಮುಂದೆ ವಾಹನ ಚಾಲಕರು, ಹೆಚ್ಚೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ವಾಹನದ ವಿಮೆ ನವೀಕರಣ ಸಂದರ್ಭದಲ್ಲಿ ಅವರಿಂದ ಸಂಚಾರ ನಿಯಮ ಉಲ್ಲಂಘನೆಗೆ ದಂಡ ಕಟ್ಟಿಸಿಕೊಂಡ ಬಳಿಕವೇ ವಾಹನಗಳ ವಿಮೆ ನವೀಕರಣ ಮಾಡಲಾಗುತ್ತದೆ. ಆಗ ವಾಹನ ಚಾಲಕರು ವಿಮೆಯ ಪ್ರೀಮಿಯಂ ನೊಂದಿಗೆ ದಂಡವನ್ನೂ ಕಟ್ಟಬೇಕಾಗುತ್ತದೆ.

ಸುರಕ್ಷಿತ ಚಾಲನೆ ಮತ್ತು ಸಂಚಾರ ನಿಯಮ ಪಾಲನೆಗಾಗಿ ವಿಮಾ ಸಂಸ್ಥೆಗಳು ಇಂತಹುದೊಂದು ಪ್ರಸ್ತಾವನ್ನು ದೆಹಲಿ ಸರ್ಕಾರದ ಮುಂದಿಟ್ಟಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT