ಸಾಂದರ್ಭಿಕ ಚಿತ್ರ 
ದೇಶ

ದೆಹಲಿ: ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ. ದಂಡ!

ದೆಹಲಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗಿದೆ.

ನವದೆಹಲಿ: ದೆಹಲಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗಿದೆ.

ಮುಕರ್ಬಾ ಚೌಕ್ ಬಳಿ, ಓವರ್‌ಲೋಡ್‌ಗಾಗಿ ಟ್ರಕ್ ಮಾಲೀಕನಿಗೆ ದೆಹಲಿ ಸಂಚಾರಿ ಪೊಲೀಸರು 2,00,500 ರೂ. ದಂಡ ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರೀ ದಂಡಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ರಾಮ್ ಕ್ರಿಷನ್ ಎಂದು ಗುರುತಿಸಲಾಗಿದೆ. ಟ್ರಕ್ ಮಾಲೀಕ ಈ ದಂಡವನ್ನು ನ್ಯಾಯಾಲಯದಲ್ಲಿ ಕಟ್ಟಬೇಕಾಗಿದೆ.

ಯಾವುದಕ್ಕೆ ಎಷ್ಟು ದಂಡ ಗೊತ್ತಾ?
ಓವರ್ ಲೋಡಿಂಗ್ ಕಾರಣಕ್ಕೆ – 20,000 + 36,000 (ಪ್ರತೀ ಹೆಚ್ಚುವರಿ ಓವರ್ ಲೋಡ್ ಟನ್ ಗೆ 2000 ದಂತೆ) ಈ ಟ್ರಕ್ ನಲ್ಲಿ 18 ಟನ್ ಹೊರೆ ಹೆಚ್ಚುವರಿಯಾಗಿತ್ತು.

ಡ್ರೈವಿಂಗ್ ಲೈಸನ್ಸ್ ಇರಿಸಿಕೊಂಡಿರದೇ ಇದ್ದುದಕ್ಕೆ – 5000 ರೂಪಾಯಿಗಳು

ವಾಹನದ ನೋಂದಣಿ ದಾಖಲಾತಿ ಇಲ್ಲದೇ ಇದ್ದುದಕ್ಕೆ – 10,000 ರೂಪಾಯಿಗಳು

ಫಿಟ್ನೆಸ್ ಪ್ರಮಾಣಪತ್ರ ಇಲ್ಲದಿದ್ದುಕ್ಕೆ – 10,000 ರೂಪಾಯಿಗಳು

ಪರವಾನಿಗೆ ಪತ್ರ ಉಲ್ಲಂಘನೆಗೆ – 10,000 ರೂಪಾಯಿಗಳು

ವಿಮೆ ಇಲ್ಲದೇ ಇದ್ದುದಕ್ಕೆ – 4000 ರೂಪಾಯಿಗಳು

ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದನ್ವಯ ಮಾಲಿನ್ಯಕ್ಕಾಗಿ – 10,000 ರೂಪಾಯಿಗಳು

ಟ್ರಕ್ ನಲ್ಲಿ ನಿರ್ಮಾಣ ಸಾಮಾಗ್ರಿಗಳನ್ನು ಮುಚ್ಚದೇ ಇದ್ದುದಕ್ಕೆ – 20,000 ರೂಪಾಯಿಗಳು

ಸೀಟ್ ಬೆಲ್ಟ್ ಧರಿಸದೇ ಇದ್ದುದಕ್ಕೆ – 1000 ರೂಪಾಯಿಗಳು

ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ 2019ರ ಪ್ರಕಾರ, ಚಾಲನಾ ದೋಷಗಳಿಗೆ ದಂಡವನ್ನು ಹೆಚ್ಚಿಸಲಾಗಿದೆ ಮತ್ತು ಸೆಪ್ಟೆಂಬರ್ 1 ರಿಂದ ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಿರಿಯ ನಾಯಕರೊಂದಿಗಿನ ಚರ್ಚೆ ಬಳಿಕ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ: ದೆಹಲಿಗೆ ತೆರಳುವ ಮುನ್ನ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ

ಡಿಕೆಶಿ ಪರ ಒಕ್ಕಲಿಗ ಸ್ವಾಮೀಜಿ ಬ್ಯಾಟಿಂಗ್, ಸಿದ್ದರಾಮಯ್ಯ ಪರ ಅಖಾಡಕ್ಕಿಳಿದ 'ಕಾಗಿನೆಲೆ' ಸ್ವಾಮೀಜಿ!

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್

ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನಿಸಿದರೆ ಡಿಕೆಶಿಯನ್ನು CM ಆಗಿ ಒಪ್ಪಿಕೊಳ್ಳುವೆ : ಕುರ್ಚಿ ಕದನಕ್ಕೆ ಪರಮೇಶ್ವರ್ ಟ್ವಿಸ್ಟ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

SCROLL FOR NEXT