ಹಿಂದಿ ದಿವಸ್-ಕಾಂಗ್ರೆಸ್ 
ದೇಶ

'ಹಿಂದಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿದ ದಿನ': 'ಹಿಂದಿ ದಿವಸ್' ಶುಭ ಕೋರಿದ ಕಾಂಗ್ರೆಸ್

ಕಾಂಗ್ರೆಸ್ ನ ಹಿರಿಯ ರಾಷ್ಟ್ರೀಯ ನಾಯಕರು ಹಿಂದಿ ದಿವಸ್ ನಿಮಿತ್ತ ದೇಶದ ಜನತೆಗೆ ಶುಭಕೋರಿದ್ದಾರೆ.

ನವದೆಹಲಿ: ಕಾಂಗ್ರೆಸ್ ನ ಹಿರಿಯ ರಾಷ್ಟ್ರೀಯ ನಾಯಕರು ಹಿಂದಿ ದಿವಸ್ ನಿಮಿತ್ತ ದೇಶದ ಜನತೆಗೆ ಶುಭಕೋರಿದ್ದಾರೆ.

ಇತ್ತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರದ ಮೋದಿ ಸರ್ಕಾರದ ಹಿಂದಿ ಹೇರಿಕೆ ವಿರೋಧಿಸಿ ಸರಣಿ ಟ್ವೀಟ್ ಮಾಡಿದ ಬೆನ್ನಲ್ಲೇ, ಅತ್ತ ಇದೇ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಂದಿ ದಿವಸ್ ನಿಮಿತ್ತ ಶುಭ ಕೋರಲಾಗಿದೆ. 

'ನಿಮ್ಮೆಲ್ಲರಿಗೂ ಹಿಂದಿ ದಿನಾಚರಣೆಯ ಶುಭಾಶಯಗಳು. ಇಂದು, ಐತಿಹಾಸಿಕ ದಿನದಂದು ಹಿಂದಿಗೆ ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಲಾಯಿತು' ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. 

ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ಮಾತ್ರವಲ್ಲದೇ, ಆ ಪಕ್ಷದ ಹಿರಿಯ ಮುಖಂಡರಾದ ಜ್ಯೋತಿರಾಧಿತ್ಯ ಸಿಂದ್ಯಾ, ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಮತ್ತು ಮಾಜಿ ಕೇಂದ್ರ ಸಚಿವ ಸಚಿನ್ ಪೈಲಟ್ ಕೂಡ ಹಿಂದಿ ದಿವಸ್ ನಿಮಿತ್ತ ಶುಭ ಕೋರಿದ್ದಾರೆ. 

ನಮ್ಮ ಭಾವನೆಗಳನ್ನು ಪರಸ್ಪರ ತಿಳಿಸುವ ಸರಳ ವಿಧಾನ ಹಿಂದಿ. ಎಲ್ಲಾ ದೇಶವಾಸಿಗಳಿಗೆ ವಿಶ್ವ ಹಿಂದಿ ದಿನಾಚರಣೆಯ ಶುಭಾಶಯಗಳು ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾಧಿತ್ಯ ಸಿಂದ್ಯಾ ಟ್ವೀಟ್ ಮಾಡಿದ್ದಾರೆ. 

ಆಸೆ ಮತ್ತು ಅಭಿಲಾಷೆ ಎಲ್ಲವನ್ನೂ ಒಂದುಗೂಡಿಸುವ ಭಾಷೆ ಹಿಂದಿ. ಹಿಂದಿ ಸಾಹಿತ್ಯ ಸೇವೆಯಲ್ಲಿ ತೊಡಗಿರುವ ಎಲ್ಲ ಬರಹಗಾರರು, ಕವಿಗಳು ಮತ್ತು ಪತ್ರಕರ್ತರಿಗೆ, ದೇಶವಾಸಿಗಳಿಗೆ ಹಿಂದಿ ದಿನಾಚರಣೆಯ ಶುಭಾಶಯಗಳು ಎಂಜು ಕಾಂಗ್ರೆಸ್ ವಕ್ತಾರ ರಣ್ ದೀಪ್ ಸುರ್ಜೇವಾಲಾ ಟ್ವೀಟ್ ಮಾಡಿದ್ದಾರೆ.

ಹಿಂದಿ ದಿನಾಚರಣೆಯ ಶುಭಾಶಯಗಳು..ಹಿಂದಿ ನಮ್ಮ ಅಧಿಕೃತ ಭಾಷೆ ಮತ್ತು ಇದು ನಮ್ಮ ಸಂಪ್ರದಾಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಕಾಂಗ್ರೆಸ್ ಮುಖಂಡ ಸಚಿನ್ ಪೈಲಟ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT