ಕೇಂದ್ರ ಸಚಿವರಿಂದ ಪ್ರಧಾನಿ ಮೋದಿ ಅವರ ಉಡುಗೊರೆಗಳ ಹರಾಜಿಗೆ ಚಾಲನೆ 
ದೇಶ

ಗಂಗಾನದಿ ಸುರಕ್ಷತೆಗಾಗಿ ಉಡುಗೊರೆ ಹರಾಜಿಗಿಟ್ಟ ಮೊದಲ ಪ್ರಧಾನಿ ಮೋದಿ: ಪ್ರಹ್ಲಾದ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲ್ಪಟ್ಟ 2,700ಕ್ಕೂ ಅಧಿಕ ಸ್ಮರಣಿಕೆ ಮತ್ತು ವಿವಿಧ ಉಡುಗೊರೆಗಳನ್ನು ಇ-ಹರಾಜು ನಡೆಸಿ ಅದರಿಂದ ಬಂದ ಹಣವನ್ನು ನಮಾಮಿ ಗಂಗಾ ಉಪಕ್ರಮದಡಿ ಗಂಗಾ ನದಿಯ ಸಂರಕ್ಷಣೆಗೆ ಬಳಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ತಿಳಿಸಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲ್ಪಟ್ಟ 2,700ಕ್ಕೂ ಅಧಿಕ ಸ್ಮರಣಿಕೆ ಮತ್ತು ವಿವಿಧ ಉಡುಗೊರೆಗಳನ್ನು ಇ-ಹರಾಜು ನಡೆಸಿ ಅದರಿಂದ ಬಂದ ಹಣವನ್ನು ನಮಾಮಿ ಗಂಗಾ ಉಪಕ್ರಮದಡಿ ಗಂಗಾ ನದಿಯ ಸಂರಕ್ಷಣೆಗೆ ಬಳಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಶನಿವಾರ ತಿಳಿಸಿದ್ದಾರೆ.

ಇದು ಪ್ರತಿಷ್ಠಿತ ಮತ್ತು ಸ್ಮರಣೀಯ ಉಡುಗೊರೆಗಳ ಎರಡನೇ ಸುತ್ತಿನ ಇ- ಹರಾಜು ಆಗಿದ್ದು, ಈ ಪ್ರದರ್ಶನವು ಶನಿವಾರದಿಂದ ಅಕ್ಟೋಬರ್ 3 ರವರೆಗೆ ವೆಬ್ ಪೋರ್ಟಲ್ www.pmmementos.gov.in ನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.

ಇಂದಿಲ್ಲಿ, ಪ್ರಧಾನ ಮಂತ್ರಿಗೆ ನೀಡಲ್ಪಟ್ಟ ಉಡುಗೊರೆಗಳ ಎರಡನೇ ಹಂತದ ವಸ್ತಪ್ರದರ್ಶನ ಮತ್ತು ಇ-ಹರಾಜನ್ನು ಉದ್ಘಾಟಿಸಿದ ಪಟೇಲ್, ತಮಗೆ ದೊರೆತ ಎಲ್ಲಾ ಉಡುಗೊರೆಗಳನ್ನು ನಮಾಮಿ ಗಂಗೆಯ ಮೂಲಕ ದೇಶದ ಜೀವಸೆಲೆಯಾಗಿರುವ ಗಂಗಾ ನದಿಯ ಸಂರಕ್ಷಣೆಗೆ ಹರಾಜು ಮಾಡಲು ನಿರ್ಧರಿಸಿದ ದೇಶದ ಮೊಟ್ಟಮೊದಲ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಂದು ಬಣ್ಣಿಸಿದರು

ಹರಾಜಿಗಿರುವ ಉಡುಗೊರೆಗಳ ಕನಿಷ್ಟ ಬೆಲೆ 200 ರೂ. ಆಗಿದ್ದರೆ ಗರಿಷ್ಟ 2.5 ಲಕ್ಷ ರೂ. ಇದೆ.

"ನಾನು ಯಾವಾಗಲೂ ನಂಬಿರುವ ಅಭ್ಯಾಸವನ್ನು ಮುಂದುವರಿಸುತ್ತಿದ್ದೇನೆ! ಕಳೆದ ಒಂದು ವರ್ಷದಲ್ಲಿ ನಾನು ಪಡೆದ ಎಲ್ಲಾ ಉಡುಗೊರೆಗಳು ಮತ್ತು ಮೆಮೆಂಟೋಗಳು ಇಂದಿನಿಂದ ಅಕ್ಟೋಬರ್ 3 ರವರೆಗೆ ಹರಾಜಾಗಲಿವೆ. ಈ ಪ್ರದರ್ಶನವು ದೆಹಲಿಯ ಇಂಡಿಯಾ ಗೇಟ್ ಬಳಿಯ ಎನ್‌ಜಿಎಂಎದಲ್ಲಿ ನಡೆಯ;ಲಿದೆ"  ಇ-ಹರಾಜು ವೆಬ್‌ಸೈಟ್‌ ಲಿಂಕ್ ಅನ್ನು ನೀಡಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಮೆಮೆಂಟೋಗಳಲ್ಲಿ 576 ಶಾಲುಗಳು, 964 ಅಂಗವಸ್ತ್ರ (ಕರಚೀಫ್) ಮತ್ತು ದೇಶದ ವೈವಿಧ್ಯಮಯ ಮತ್ತು ವರ್ಣರಂಜಿತ ಸಂಸ್ಕೃತಿಯನ್ನು ಚಿತ್ರಿಸುವ ವಿವಿಧ ಜಾಕೆಟ್‌ಗಳು ಸೇರಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜೀನಾಮೆ ಬಗ್ಗೆ ಖುದ್ದು ಸುಳಿವು ನೀಡಿದ CM ಸಿದ್ದರಾಮಯ್ಯ; ಸಾಮಾಜಿಕ ಮಾಧ್ಯಮದಲ್ಲಿ ಮಹತ್ವದ ಪೋಸ್ಟ್​!

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

ಗಡಿಯಲ್ಲಿ ಕಟ್ಟುನಿಟ್ಟಿನ ಕ್ರಮ: 15 ಕಿ.ಮೀ. ಒಳಗಿನ ಅಕ್ರಮ ನಿರ್ಮಾಣ ಕೆಡವಲು ಅಮಿತ್ ಶಾ ಸೂಚನೆ

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ಸಿಎಂ ಸಿದ್ದರಾಮಯ್ಯ ಪದತ್ಯಾಗ; ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಹತ್ವದ ಸಭೆ

SCROLL FOR NEXT