ಆನಂದ್ ಶರ್ಮ 
ದೇಶ

ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು; ಹಿಂದಿ ಭಾಷೆಗೆ ಕಾಂಗ್ರೆಸ್ ಪ್ರತಿಕ್ರಿಯೆ 

ದೇಶದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಕೇಂದ್ರದ ನಾಯಕರು ನಿನ್ನೆ ಸಾರಿದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿರುವ ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು ಮತ್ತು ಸಂವಿಧಾನವನ್ನು ರಚಿಸಿದವರು ಇತ್ಯರ್ಥಪಡಿಸಿದ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಹೇಳಿದೆ. 

ನವದೆಹಲಿ: ದೇಶದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ಕೇಂದ್ರದ ನಾಯಕರು ನಿನ್ನೆ ಸಾರಿದ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ದೇಶದಲ್ಲಿರುವ ತ್ರಿಭಾಷಾ ಸೂತ್ರವನ್ನು ಸಂಕುಚಿತಗೊಳಿಸಬಾರದು ಮತ್ತು ಸಂವಿಧಾನವನ್ನು ರಚಿಸಿದವರು ಇತ್ಯರ್ಥಪಡಿಸಿದ ಭಾವನಾತ್ಮಕ ವಿಷಯಗಳ ಬಗ್ಗೆ ವಿವಾದಗಳನ್ನು ಹುಟ್ಟುಹಾಕಬಾರದು ಎಂದು ಹೇಳಿದೆ.


ದೇಶದಲ್ಲಿ ಕಲಹ ಮತ್ತು ಅಶಾಂತಿಯನ್ನು ಉಂಟುಮಾಡುವ ಕಾರಣ ತ್ರಿಭಾಷಾ ಸೂತ್ರದ ಬಗ್ಗೆ ಪುನರ್ವಿಮರ್ಶೆ ಮಾಡುವ ಬಗ್ಗೆ ಯಾವುದೇ ಸೂಚನೆ ನೀಡಬಾರದು ಎಂದು ಕಾಂಗ್ರೆಸ್ ಹೇಳಿದೆ.ತ್ರಿಭಾಷಾ ಸೂತ್ರದಡಿ ಹಿಂದಿ, ಇಂಗ್ಲಿಷ್ ಮತ್ತು ಆಯಾ ರಾಜ್ಯಗಳ ಸ್ಥಳೀಯ ಭಾಷೆ ಬರುತ್ತದೆ. 


ನಿನ್ನೆ ಮಾತನಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, ದೇಶಕ್ಕೆ ಸಾಮಾನ್ಯವಾದ ಭಾಷೆಯಾಗಿ ಹಿಂದಿ ಭಾಷೆಯಾಗಬೇಕು. ಹಿಂದಿ ಭಾಷೆಯನ್ನು ಬಹುತೇಕರು ಮಾತನಾಡುತ್ತಿದ್ದು ಅದು ದೇಶವನ್ನು ಒಂದುಗೂಡಿಸುತ್ತದೆ ಎಂದಿದ್ದರು.


ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮ, ಶಾ ಅವರ ಮಾತುಗಳು ನಿಜವಾದರೆ ಅಮಿತ್ ಶಾ ಅವರು ಹಿಂದಿ ಅಧಿಕೃತ ಭಾಷೆ ಎಂದು ಬಹಳ ವರ್ಷಗಳ ಹಿಂದೆಯೇ ಘೋಷಿಸಲಾಗಿತ್ತು. ಸಂವಿಧಾನ ವೈವಿಧ್ಯತೆಯನ್ನು ಗೌರವಿಸುತ್ತಿದ್ದು ಅದು 22 ಭಾಷೆಗಳನ್ನು ಗುರುತಿಸಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT