ದೇಶ

ಆಂಧ್ರ ಪ್ರದೇಶ: ಮಾಜಿ ಸ್ಪೀಕರ್ ಡಾ, ಕೊಡೆಲಾ ಶಿವ ಪ್ರಸಾದ್ ಆತ್ಮಹತ್ಯೆ

Shilpa D

ಹೈದರಾಬಾದ್: ಆಂಧ್ರ ಪ್ರದೇಶ ಮಾಜಿ ಸ್ಪೀಕರ್ ಹಾಗೂ ಹಿರಿಯ ಟಿಡಿಪಿ ನಾಯಕ ಡಾ, ಕೊಡೆಲಾ ಶಿವ ಪ್ರಸಾದ್ ತಮ್ಮ  ಬಂಜಾರಾ ಹಿಲ್ಸ್ ನಿವಾಸದಲ್ಲಿ ಇಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೊಡೆಲಾ ಶಿವ ಪ್ರಸಾದ್ ನಿಧನಕ್ಕೆ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಆಘಾತ ವ್ಯಕ್ತ ಪಡಿಸಿದ್ದಾರೆ.ಕೊಡೆಲಾ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ಆರು ಬಾರಿ ಶಾಸಕರಾಗಿದ್ದ ಕೊಡೆಲಾ ಆಂಧ್ರ ಪ್ರದೇಶ ವಿಭಜನೆಯಾದ ನಂತರ ಮೊದಲ ಬಾರಿಗೆ ಸ್ಪೀಕರ್ ಆಗಿ ನೇಮಕವಾಗಿದ್ದರು, 1985 ರಲ್ಲಿ ಎನ್ ಟಿ ಆರ್, ಸಂಪುಟದಲ್ಲಿ ಗೃಹ ಸಚಿವರಾಗಿ ಕೆಲಸ ನಿರ್ವಹಿಸಿದ್ದರು.

SCROLL FOR NEXT