ದೇಶ

ಬಿರುಗಾಳಿಗೆ ತೀವ್ರವಾಗಿ ಅಲುಗಾಡಿದ ಏರ್ ಇಂಡಿಯಾ ವಿಮಾನಗಳು, ಭೀತಿಗೊಳಗಾದ ಪ್ರಯಾಣಿಕರು

Manjula VN

ನವದೆಹಲಿ: ಬಿರುಗಾಳಿ ಪರಿಣಾಮ ರಾಜಧಾನಿ ದೆಹಲಿಯಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ತೀವ್ರವಾಗಿ ಅಲುಗಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಭೀತಿಗೊಳಗಾದ ಘಟನೆ ಭಾನುವಾರ ನಡೆದಿದೆ. 

ದೆಹಲಿಯಿಂದ-ವಿಜಯವಾಡಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಸುಮಾರು 172 ಪ್ರಯಾಣಿಕರಿದ್ದರು. ವಿಮಾನ ಇದ್ದಕ್ಕಿದ್ದಂತೆ ಅಲುಗಾಡಿದ್ದರಿಂದ ಪ್ರಯಾಣಿಕರಿಗೆ ತಮ್ಮ ಜೀವವೇ ಬಾಯಿಗೆ ಬಂದಂತಾಗಿದೆ. ವಿಮಾನ ಅಲುಗಾಡಿದ ಪರಿಣಾಮ ಒಳಭಾಗದಲ್ಲಿ ಹಾನಿಗಳಾಗಿವೆ. ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆದ ಕಾರಣ ಪ್ರಯಾಣಿಕರೆಲ್ಲರೂ ಸುರಕ್ಷಿತರಾಗಿದ್ದಾರೆಂದು ತಿಳಿದುಬಂದಿದೆ. 

ಎಐ-467 ವಿಮಾನ ದೆಹಲಿಯಿಂದ ವಿಜಯವಾಡಕ್ಕೆ ತೆರಳುವ ವೇಳೆ ಅಲುಗಾಡಿದೆ. ಅಲುಗಾಡಿದ ಪರಿಣಾಮ ವಿಮಾನದ ಹೊರಕವಚಕ್ಕೆ ಸ್ವಲ್ಪಮಟ್ಟಿಗೆ ಹಾನಿಯಾಗಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ, ವಿಮಾನವನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ತನಿಖೆಗೆ ಆದೇಶಿಸಿದ್ದಾರೆ. 

SCROLL FOR NEXT