ದೇಶ

ಲಾಕ್ ಡೌನ್ ವಿಸ್ತರಣೆ ತೀರ್ಮಾನ ಸರಿ; ಆದರೆ ಬಡವರ, ರಾಜ್ಯಗಳ ಕಷ್ಟ ಪರಿಹರಿಸಿ: ಮೋದಿಗೆ ಚಿದಂಬರಂ ಮನವಿ

Vishwanath S

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಮುಂದಿನ ತಿಂಗಳ 3 ರವರೆಗೆ ವಿಸ್ತರಣೆ ಮಾಡಿದ ಕೇಂದ್ರದ ಕ್ರಮವನ್ನು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಸ್ವಾಗತಿಸಿದ್ದಾರೆ. 

ಲಾಕ್ ಡೌನ್ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಅವರು ಕೈಗೊಂಡಿರುವ ಈ ನಿರ್ಧಾರ ಉತ್ತಮವಾಗಿದೆ. ಇದಕ್ಕೆ ಬೆಂಬಲವಿದೆ ಆದರೆ, ರಾಜ್ಯಗಳಿಗೆ ಆರ್ಥಿಕ ಪ್ಯಾಕೇಜ್ ಘೊಷಣೆ ಮಾಡಿ. ಬಡವರ ಕಷ್ಟ ನೋಡಿ ಕೇಳಿ ಅದನ್ನು ಕೂಡಲೆ ನಿವಾರಿಸಲು ಕ್ರಮ ಕೈಗೊಳ್ಳಿ ಎಂದೂ ಹೇಳಿದ್ದಾರೆ.

ಮಹಾಮಾರಿ ಕೊರೋನಾ ವೈರಸ್ ನಿಗ್ರಹಕ್ಕಾಗಿ ಮಾರ್ಚ್ 24 ರಂದು ಘೋಷಣೆ ಮಾಡಿದ್ದ ಸುದೀರ್ಘ 21 ದಿನಗಳ ಭಾರತ ಲಾಕ್ ಡೌನ್ ಮಂಗಳವಾರ ಮುಕ್ತಾಯಗೊಳ್ಳಲಿದೆ. 

ಈ ಹಿನ್ನೆಲೆಯಲ್ಲಿ ಇಂದು ಜನತೆಯನ್ನುದ್ದೇಶಿಸಿ ಮಾತನಾಡಿರುವ ಮೋದಿ ಮೇ.3ರವರೆಗೆ ಅಂದರೆ ಇನ್ನು 19 ದಿನಗಳವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. 

ರಾಜ್ಯಗಳಿಗೆ ಆರ್ಥಿಕ ಸಂಕಷ್ಟ ತಡೆದುಕೊಳ್ಳುವ ಶಕ್ತಿಯಲ್ಲ ಅವರಿಗೆ ಸಹಾಯ ಮಾಡಿ ಎಂದೂ ಚಿದು ಮನವಿ ಮಾಡಿದ್ದಾರೆ.

SCROLL FOR NEXT