ಸಾಂದರ್ಭಿಕ ಚಿತ್ರ 
ದೇಶ

ದುಬಾರಿ ಬೆಲೆಗೆ ಚೀನಾ ಕೋವಿಡ್-19 ಟೆಸ್ಟ್ ಕಿಟ್ ಗಳನ್ನು ಖರೀದಿಸಿದ ಭಾರತ: ನ್ಯಾಯಾಂಗ ಹೋರಾಟದಲ್ಲಿ ಬಹಿರಂಗ

ಮಹಾಮಾರಿ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ. ಆದರೆ, ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು  ಬಳಸದೆ ಹಾಗೆಯೇ ಇಡಲಾಗಿದೆ.

ನವದೆಹಲಿ: ಮಹಾಮಾರಿ ಕೊರೋನಾವೈರಸ್ ನಿಯಂತ್ರಣಕ್ಕಾಗಿ ಭಾರತ ದುಬಾರಿ ಬೆಲೆ ನೀಡಿ ಚೀನಾದ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಿರುವುದು ತಿಳಿದುಬಂದಿದೆ.ಆದರೆ,ದೋಷಪೂರಿತ ಫಲಿತಾಂಶದಿಂದಾಗಿ ಅನೇಕ ರಾಜ್ಯಗಳಲ್ಲಿ ಅವುಗಳನ್ನು  ಬಳಸದೆ ಹಾಗೆಯೇ ಇಡಲಾಗಿದೆ.

ಭಾರತೀಯ ವಿತರಕ ಸಂಸ್ಥೆ ರಿಯಲ್ ಮೆಟಬಾಲಿಕ್ಸ್  ಮೂಲಕ ದುಬಾರಿ ಬೆಲೆಗೆ ಚೀನಾದ ಪರೀಕ್ಷಾ ಕಿಟ್ ಗಳನ್ನು ಭಾರತ ಸರ್ಕಾರಕ್ಕೆ ಮಾರಾಟ ಮಾಡಿದೆ.ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವ ಆಮದುದಾರರು ಮತ್ತು ವಿತರಕರ ನಡುವಿನ ಕಾನೂನು ವಿವಾದದಿಂದ ಇದು ತಿಳಿದುಬಂದಿದೆ. 

ಚೀನಾದ ವೊಡ್ಫೊ ಸಂಸ್ಥೆಯಿಂದ  ಐದು ಲಕ್ಷ ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಖರೀದಿಸಲು ಭಾರತ ಮಾರ್ಚ್ 27 ರಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮೂಲಕ ಆರ್ಡರ್ ಮಾಡಿತ್ತು. ಐಸಿಎಂಆರ್ ಮತ್ತು ಅರ್ಕ್ ಫಾರ್ಮಸ್ಪೂಟಿಕಲ್ಸ್ , ನಡುವೆ ಸಹಿ ಒಪ್ಪಂದ ನಡೆದಿತ್ತು.

ಕ್ಷಿಪ್ರ ಅಂಟಿಬಾಡಿ ಟೆಸ್ಟ್ ಗಳನ್ನೊಳಗೊಂಡಂತೆ 650, 000 ಕಿಟ್ ಗಳನ್ನು ಭಾರತಕ್ಕೆ ಪೂರೈಸಲಾಗುತ್ತಿದೆ ಎಂದು ಏಪ್ರಿಲ್ 16 ರಂದು ಚೀನಾದ ಭಾರತೀಯ ರಾಯಭಾರಿ ವಿಕ್ರಮ್ ಮಿಶ್ರಿ ಟ್ವೀಟ್ ಮಾಡಿದ್ದರು. 

ಆಮದುದಾರ ಸಂಸ್ಥೆ ಮ್ಯಾಟ್ರಿಕ್ಸ್ ಚೀನಾದಿಂದ ತಲಾ 245 ರೂ.ನಂತೆ ಕಿಟ್ ಗಳನ್ನು ಖರೀದಿಸಿದೆ. ವಿತರಕರಾದ ರಿಯಲ್ ಮೆಟಾಬಾಲಿಕ್ಸ್ ಮತ್ತು ಅರ್ಕ್ ಫಾರ್ಮಸ್ಪೂಟಿಕಲ್ಸ್  ಇದೇ ಕಿಟ್ ಗಳನ್ನು ತಲಾ 600 ರೂ.ನಂತೆ ಸರ್ಕಾರಕ್ಕೆ ಮಾರಾಟ ಮಾಡಿವೆ. ಅಂದರೆ ಶೇ. 60 ರಷ್ಟು ಬೆಲೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. 

ತಮಿಳುನಾಡು ಸರ್ಕಾರ ಕೂಡಾ ಆಮದುದಾರ ಮ್ಯಾಟ್ರಿಕ್ಸ್ ಮೂಲಕ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ನಿಂದ  ಸಂಸ್ಥೆಯಿಂದ  ಇದೇ ಕಿಟ್ ಗಳನ್ನು ತಲಾ 600 ರೂ.ನಂತೆ  ಖರೀದಿಸಿದಾಗ ಸಮಸ್ಯೆ ಆರಂಭವಾಗಿದೆ. ತಮಿಳುನಾಡು ಮತ್ತು ಶಾನ್ ಬಯೋಟೆಕ್ ನಡುವಿನ ಖರೀದಿ ಒಪ್ಪಂದದ ದಾಖಲೆಗಳು ಕೂಡಾ ಲಭ್ಯವಾಗಿವೆ.

ಮ್ಯಾಟ್ರಿಕ್ಸ್ ಸಂಸ್ಥೆ ಮತ್ತೊಂದು ವಿತರಕ ಸಂಸ್ಥೆ ಶಾನ್ ಬಯೋಟೆಕ್ ನೊಂದಿಗೆ ತೊಡಗಿಸಿಕೊಂಡಿದ್ದು, ತಮಿಳುನಾಡು ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ನಿಯಮ ಉಲ್ಲಂಘಿಸಿದೆ ಎಂದು ಮೆಟಾಬಾಲಿಕ್ಸ್ ಸಂಸ್ಥೆ ಹೈಕೋರ್ಟ್ ನಲ್ಲಿ ಹೇಳಿದೆ 

ದುಬಾರಿ ಬೆಲೆಗೆ  ಭಾರತ ಚೀನಾದ ಕಿಟ್ ಗಳನ್ನು ಖರೀದಿಸಿರುವುದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪ್ರತಿ ಕಿಟ್ ಗಳ ಬೆಲೆಯನ್ನು 400 ರೂ. ಗೆ ಇಳಿಸಬೇಕೆಂದು ನ್ಯಾಯಾಲಯ ನಿರ್ದೇಶನ ನೀಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT