ಪತ್ನಿಯೊಂದಿಗಿರುವ ಗುಡ್ಡು 
ದೇಶ

ದಿನಸಿ ಸಾಮಾಗ್ರಿ ತರಲು ಕಳುಹಿಸಿದ್ರೆ, ಹೆಂಡತಿ ಕರೆತಂದ ಭೂಪ: ತಾಯಿಗೆ ಆಘಾತ!

ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಘಾಜಿಯಾಬಾದ್: ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಗುಡ್ಡು (26) ವ್ಯಕ್ತಿ ವಿವಾದವಾದ ವ್ಯಕ್ತಿಯಾಗಿದ್ದಾನೆ. ದಿನಸಿ ಸಾಮಾಗ್ರಿ ತರುವಂತೆ ಪುತ್ರನನ್ನು ಅಂಗಡಿಗೆ ಕಳುಹಿಸಲಾಗಿತ್ತು. ಆದರೆ, ಆತ ಬರುವಾಗ ಹೆಂಡತಿಯೊಂದಿಗೆ ಬಂದಿದ್ದ. ಈ ವಿವಾಹವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಇದೀಗ ಯುವಕನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
 
ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದೆ. ಆದರೆ, ಲಾಕ್'ಡೌನ್ ಇದ್ದ ಪರಿಣಾಮ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಬಳಿಕ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಇದೀಗ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ. 

ವಿವಾಹ ಹಿನ್ನೆಲೆಯಲ್ಲಿ ಜಗಳವಾಗುತ್ತಿರುವ ಪರಿಣಾಮ ಪೊಲೀಸರು ಇದೀಗ ಸವಿತಾ ನೆಲೆಯೂರಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿಗಳು ನೆಲೆಯೂರಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT