ಪತ್ನಿಯೊಂದಿಗಿರುವ ಗುಡ್ಡು 
ದೇಶ

ದಿನಸಿ ಸಾಮಾಗ್ರಿ ತರಲು ಕಳುಹಿಸಿದ್ರೆ, ಹೆಂಡತಿ ಕರೆತಂದ ಭೂಪ: ತಾಯಿಗೆ ಆಘಾತ!

ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಘಾಜಿಯಾಬಾದ್: ದಿನಸಿ ಸಾಮಾಗ್ರಿ ತರುವಂತೆ ಅಂಗಡಿಗೆ ಕಳುಹಿಸಿದರೆ, ಹೆಂಡತಿ ಕರೆತಂದು ನಿಲ್ಲಿಸಿದ ಪುತ್ರನನ್ನು ಕಂಡು ತಾಯಿಯೊಬ್ಬರೂ ಆಘಾತಕ್ಕೊಳಗಾದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ. 

ಗುಡ್ಡು (26) ವ್ಯಕ್ತಿ ವಿವಾದವಾದ ವ್ಯಕ್ತಿಯಾಗಿದ್ದಾನೆ. ದಿನಸಿ ಸಾಮಾಗ್ರಿ ತರುವಂತೆ ಪುತ್ರನನ್ನು ಅಂಗಡಿಗೆ ಕಳುಹಿಸಲಾಗಿತ್ತು. ಆದರೆ, ಆತ ಬರುವಾಗ ಹೆಂಡತಿಯೊಂದಿಗೆ ಬಂದಿದ್ದ. ಈ ವಿವಾಹವನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಇದೀಗ ಯುವಕನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
 
ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾಗಿದ್ದೆ. ಆದರೆ, ಲಾಕ್'ಡೌನ್ ಇದ್ದ ಪರಿಣಾಮ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಬಳಿಕ ಪತ್ನಿ ಸವಿತಾ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದಳು. ಇದೀಗ ಪತ್ನಿಯನ್ನು ಮನೆಗೆ ಕರೆತರಲು ನಿರ್ಧರಿಸಿದ್ದೆ ಎಂದು ಗುಡ್ಡು ಹೇಳಿದ್ದಾರೆ. 

ವಿವಾಹ ಹಿನ್ನೆಲೆಯಲ್ಲಿ ಜಗಳವಾಗುತ್ತಿರುವ ಪರಿಣಾಮ ಪೊಲೀಸರು ಇದೀಗ ಸವಿತಾ ನೆಲೆಯೂರಿದ್ದ ದೆಹಲಿಯ ಬಾಡಿಗೆ ಮನೆ ಮಾಲೀಕರಿಗೆ ಮನವಿ ಮಾಡಿಕೊಂಡಿದ್ದು, ದಂಪತಿಗಳು ನೆಲೆಯೂರಲು ಅವಕಾಶ ಮಾಡಿಕೊಡುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಅಭಿಷೇಕ್ ಶರ್ಮಾನನ್ನು ಮೂರೇ ಎಸೆತಗಳಲ್ಲಿ ಔಟ್ ಮಾಡುತ್ತೇನೆ: ಪಾಕ್ ನ 152.65 kmph ವೇಗಿಯ ಉದ್ಧಟತನದ ಮಾತು

ಡಿಕೆ ಶಿವಕುಮಾರ್ ಇದ್ದ ವೇದಿಕೆಯಲ್ಲೇ ಹೈಡ್ರಾಮಾ: RSS ಸಮವಸ್ತ್ರದಲ್ಲಿ ಬಿಜೆಪಿ ಶಾಸಕ ಮುನಿರತ್ನ ಧರಣಿ! Video

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

SCROLL FOR NEXT