ದೇಶ

ಆರ್ಟಿಕಲ್ 370 ರದ್ದತಿಗೆ ಒಂದು ವರ್ಷ: ಗುಪ್ತಚರ ಮಾಹಿತಿ ಮೇರೆಗೆ ಶ್ರೀನಗರದಲ್ಲಿ ಕರ್ಫ್ಯೂ ಜಾರಿ

Srinivas Rao BV

ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಾಗಿದ್ದ ಸಂವಿಧಾನದ ಆರ್ಟಿಕಲ್ 370 ರದ್ದತಿಗೆ ಆ.05 ಕ್ಕೆ ಒಂದು ವರ್ಷವಾಗಲಿದೆ. 

ಆ.05 ನ್ನು ಪಾಕಿಸ್ತಾನದ ಕೃಪಾಪೋಷಿತ ಪ್ರತ್ಯೇಕತಾವಾದಿಗಳು ಕರಾಳ ದಿನವನ್ನಾಗಿ ಆಚರಣೆ ಮಾಡಲಿದ್ದು, ಹಿಂಸಾಚಾರದ ಮೂಲಕ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿರುವುದರ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಆ.03 ರಿಂದ ಆ.05 ವರೆಗೆ ಕರ್ಫ್ಯೂ ಜಾರಿಯಲ್ಲಿರಲಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಾಹಿದ್ ಇಕ್ಬಾಲ್ ಚೌಧರಿ, ಪಾಕ್ ಕೃಪಾಪೋಷಿತ ಪ್ರತ್ಯೇಕತಾವಾದಿಗಳು ಆ.05 ನ್ನು ಕರಾಳದಿನವನ್ನಾಗಿ ಆಚರಿಸಿ, ಹಿಂಸಾತ್ಮಕ ಪ್ರತಿಭಟನೆ ನಡೆಸುವುದನ್ನು ಯೋಜಿಸಲು ಸಂಚು ರೂಪಿಸಿರುವ ಬಗ್ಗೆ ಶ್ರೀನಗರ ಎಸ್ ಪಿಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ಫ್ಯೂ ಜಾರಿಗೆ ಆದೇಶಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.  

SCROLL FOR NEXT