ದೇಶ

ರಾಜಸ್ಥಾನ ಬಿಕ್ಕಟ್ಟು: ವಿಹಾರಕ್ಕೆ ತೆರಳಿರುವ 12 ಬಿಜೆಪಿ ಶಾಸಕರ ಬಗ್ಗೆ ಅರಿವಿದೆ- ಸತೀಶ್ ಪೂನಿಯಾ

Nagaraja AB

ಚೊಮು: ವಿಹಾರಕ್ಕೆ ಹೋಗಿರುವ 12 ಬಿಜೆಪಿ ಶಾಸಕರು ಬಗ್ಗೆ ಅರಿವಿದೆ. ಈ ವಿಚಾರದಲ್ಲಿ ಪಕ್ಷದ ಶಾಸಕರ ವಿರುದ್ಧ ಕಾಂಗ್ರೆಸ್ ವದಂತಿಗಳನ್ನು ಹರಡುತ್ತಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

12 ಶಾಸಕರು ವಿಹಾರಕ್ಕೆ ತೆರಳುವ ಬಗ್ಗೆ ಅರಿವಿದೆ. ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಾಗ ಎಲ್ಲರೂ ಅಲ್ಲಿಗೆ ಬರುತ್ತಾರೆ. ರಾಜಸ್ಥಾನ ಬಿಜೆಪಿ ಒಗ್ಗಟಿನಿಂದ ಇದೆ. ಆದರೆ, ಮುಖ್ಯಮಂತ್ರಿಯ ಕೀಳುಮಟ್ಟದ ರಾಜಕೀಯದೊಂದಿಗೆ ನಮ್ಮ ಪಕ್ಷದ ಶಾಸಕರ ಬಗ್ಗೆ ಕಾಂಗ್ರೆಸ್ ಪಕ್ಷ ವದಂತಿಗಳನ್ನು ಹರಡುತ್ತಿದೆ ಎಂದು ಎಎನ್ ಐ ಸುದ್ದಿಸಂಸ್ಥೆಗೆ ಅವರು ತಿಳಿಸಿದ್ದಾರೆ.

ನಮ್ಮ ಶಾಸಕರ ಬಗ್ಗೆ ನಮಗೆ ನಂಬಿಕೆಯಿದೆ. ಅದು ಹಾಗೆಯೇ ಉಳಿಯಲಿದೆ. ಕಾಂಗ್ರೆಸ್ ಪಕ್ಷಕ್ಕೆ ತನ್ನ ಶಾಸಕರ ಬಗ್ಗೆ ನಂಬಿಕೆ ಇಲ್ಲ, ರಾಜಸ್ಥಾನ ಪೊಲೀಸರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ, ನಮ್ಮ ಶಾಸಕರನ್ನು ಪೊಲೀಸರು ಗುರಿಯಾಗಿಸಿಕೊಂಡಿದ್ದಾರೆ. ಆದಾಗ್ಯೂ, ನಾವು ಶಾಸಕರನ್ನು ವಿಹಾರಕ್ಕೆ ಕಳುಹಿಸಿದ್ದೇವೆ  ಎಂದು ಸತೀಶ್ ಪೂನಿಯಾ ಆರೋಪಿಸಿದರು.

ಈ ಮಧ್ಯೆ ಗೆಹ್ಲೋಟ್ ನೇತೃತ್ವದ ರಾಜಸ್ಥಾನ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಸೇರುವಂತೆ ಪಕ್ಷದ ಶಾಸಕರ ಮೇಲೆ ಬೆದರಿಕೆ ಹಾಕುತ್ತಿದೆ ಎಂದು ಬಿಜೆಪಿ ವಕ್ತಾರ ರಾಮ್ ಲಾಲ್ ಶರ್ಮಾ ಆರೋಪಿಸಿದ್ದಾರೆ.

SCROLL FOR NEXT