ದೇಶ

ನ್ಯಾಷನಲ್ ಕಾನ್ಫರೆನ್ಸ್‌ಗೆ ಬಹುದೊಡ್ಡ ಹಿನ್ನಡೆ: ಲೇಹ್ ಎನ್‍ಸಿ ಘಟಕ ಸಂಪೂರ್ಣ ಬಿಜೆಪಿ ತೆಕ್ಕೆಗೆ!

Vishwanath S

ಲೇಹ್: ಕೇಂದ್ರಾಡಳಿತ ಪ್ರದೇಶ ಲಡಾಖ್‌ನಲ್ಲಿ ಪಕ್ಷದ ಸಂಪೂರ್ಣ ಲೇಹ್ ಘಟಕವು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ನ್ಯಾಷನಲ್ ಕಾನ್ಫರೆನ್ಸ್‌(ಎನ್‌ಸಿ) ದೊಡ್ಡ ಹಿನ್ನಡೆ ಅನುಭವಿಸಿದೆ.

ಕಳೆದ ಒಂದು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಹನ್ನೆರಡು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ತೆಕ್ಕೆ ಸೇರಿದ್ದಾರೆ. 

ಒಟ್ಟು 66 ಎನ್‌ಸಿ ನಾಯಕರು ಮತ್ತು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ನೀಡಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಬಿಜೆಪಿಗೆ ಸೇರಿದ್ದು, ಲೇಹ್‌ ಸಂಪೂರ್ಣವಾಗಿ ಎನ್ ಸಿ ಪಕ್ಷದಿಂದ ಮುಕ್ತವಾಗಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.

ಜನಸ್ಕರ್ ಮತ್ತು ನೊಬ್ರಾ ಘಟಕಗಳು ಸಹ ಬಿಜೆಪಿಗೆ ಸೇರಿಕೊಂಡಿವೆ. ಎನ್‌ಸಿಗೆ ರಾಜೀನಾಮೆ ನೀಡಿದ ನಂತರ ಬಿಜೆಪಿಗೆ ಸೇರಿದವರಲ್ಲಿ ಹಾಲಿ ಕೌನ್ಸಿಲರ್ ಪಿ ವಾಂಗ್‌ಡಾನ್ ಶುನು ಮತ್ತು ಡೋರ್ಜಯ್ ಅಂಚುಕ್ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಿಜೆಪಿಗೆ ಸೇರಿದ ನಾಯಕರು ಮತ್ತು ಕಾರ್ಯಕರ್ತರನ್ನು ಸ್ವಾಗತಿಸಿದ ಲಡಾಖ್ ಕ್ಷೇತ್ರದ ಸಂಸದ ನಮಗ್ಯಾಲ್, ಇದು ಲಡಾಖ್ ಮತ್ತು ಬಿಜೆಪಿ ಜನರಿಗೆ ಐತಿಹಾಸಿಕ ದಿನವಾಗಿದೆ ಎಂದಿದ್ದಾರೆ. 

ಕೇಂದ್ರಾಡಳಿತ ಪ್ರದಶ ಲಡಾಖ್ ನ ಸುಧಾರಣೆ ಮತ್ತು ಅಭಿವೃದ್ಧಿಗಾಗಿ ಕೆಲಸ ಮಾಡಲು ಬಿಜೆಪಿ ಬದ್ಧವಾಗಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

SCROLL FOR NEXT