ಸಿಬಿಐ ವಿಚಾರಣೆಗೆ ಆಗಮಿಸಿದ ಸಿದ್ಧಾರ್ಥ್ ಪಠಾನಿ 
ದೇಶ

ಸುಶಾಂತ್ ಸಿಂಗ್ ರಜಪೂತ್ ಸಾವು: ಸಿಬಿಐನಿಂದ ಸಿದ್ಧಾರ್ಥ್ ಪಠಾನಿ, ನೀರಜ್ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಯನ್ನೆದುರಿಸಲು ಅವರ ಜೊತೆ ವಾಸಿಸುತ್ತಿದ್ದ ಸುದ್ಧಾರ್ಥ್ ಪಿತಾನಿ ಮತ್ತು ಅಡುಗೆ ಕೆಲಸಗಾರ ನೀರಜ್ ಸಿಂಗ್ ಡಿಆರ್ ಡಿಒ ಗೆಸ್ಟ್ ಹೌಸ್ ಬಳಿ ಭಾನುವಾರ ಬೆಳಗ್ಗೆ ಆಗಮಿಸಿದರು.

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಚಾರಣೆಯನ್ನೆದುರಿಸಲು ಅವರ ಜೊತೆ ವಾಸಿಸುತ್ತಿದ್ದ ಸುದ್ಧಾರ್ಥ್ ಪಿತಾನಿ ಮತ್ತು ಅಡುಗೆ ಕೆಲಸಗಾರ ನೀರಜ್ ಸಿಂಗ್ ಡಿಆರ್ ಡಿಒ ಗೆಸ್ಟ್ ಹೌಸ್ ಬಳಿ ಭಾನುವಾರ ಬೆಳಗ್ಗೆ ಆಗಮಿಸಿದರು.

ಮುಂಬೈಯ ಕಲಿನಾದಲ್ಲಿರುವ ಅತಿಥಿ ಗೃಹಕ್ಕೆ ಇಬ್ಬರೂ ಇಂದು ಬೆಳಗ್ಗೆ ಪ್ರತ್ಯೇಕವಾಗಿ ಆಗಮಿಸಿದರು. ಸಿಬಿಐ ಅಧಿಕಾರಿಗಳು ಅವರ ವಿಚಾರಣೆ ನಡೆಸಿದ್ದಾರೆ.

ನಿನ್ನೆ ಸಿಬಿಐ ತಂಡ ನೀರಜ್, ಸುಶಾಂತ್ ಅವರ ಮತ್ತೊಬ್ಬ ಮನೆಗೆಲದವರಾಗಿದ್ದ ದೀಪೇಶ್ ಸಾವಂತ್ ಮತ್ತು ಪಿಠಾನಿಯವರೊಂದಿಗೆ ನಟ ವಾಸಿಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಹೋಗಿ ಜೂನ್ 14ರಂದು ಮೃತಪಟ್ಟ ಹಿಂದಿನ ದಿನ ಏನೆಲ್ಲಾ ನಡೆದಿರಬಹುದೆಂದು ಸನ್ನಿವೇಶವನ್ನು ಮರುಸೃಷ್ಟಿಸಲು ಹೋಗಿದ್ದರು.

ಸುಶಾಂತ್ ಸಿಂಗ್ ರಜಪೂತ್ ಮೃತಪಟ್ಟಿದ್ದ ಸಮಯದಲ್ಲಿ ಈ ಮೂವರೂ ಅಪಾರ್ಟ್ ಮೆಂಟಿನಲ್ಲಿದ್ದರು ಎಂದು ಹೇಳಲಾಗುತ್ತಿದೆ. ವಿಧಿ ವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಫ್ಲಾಟ್ ಗೆ ಆಗಮಿಸಿದ ಸಿಬಿಐ ತಂಡ ವಿಚಾರಣೆ ಮುಗಿಸಿ ಹೋಗುವಾಗ ರಾತ್ರಿ 8 ಗಂಟೆಯಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

SCROLL FOR NEXT