ಶರಣಾದ ನಕ್ಸಲರು 
ದೇಶ

ಆಂಧ್ರ ಪ್ರದೇಶ: ಪೊಲೀಸರಿಗೆ ಶರಣಾದ 12 ಮಂದಿ ನಕ್ಸಲರು

ಆಂಧ್ರ ಪ್ರದೇಶ ಪೊಲೀಸರ ಬಳಿ 12 ಮಂದಿ ನಕ್ಸಲರು ಶನಿವಾರ ಶರಣಾಗಿದ್ದಾರೆ.

ವಿಶಾಖಪಟ್ಟಣ: ಆಂಧ್ರ ಪ್ರದೇಶ ಪೊಲೀಸರ ಬಳಿ 12 ಮಂದಿ ನಕ್ಸಲರು ಶನಿವಾರ ಶರಣಾಗಿದ್ದಾರೆ.

ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ಚಿಂತಪಲ್ಲಿ ಪ್ರದೇಶದಲ್ಲಿ 12 ನಕ್ಸಲರು ಪೊಲೀಸರಿಗೆ ಶರಣಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ನಕ್ಸಲರು ಚಿಂತಪಲ್ಲಿ ಎಎಸ್‌ಪಿ ವಿದ್ಯಾ ಸಾಗರ್ ನಾಯ್ಡು ಅವರ ಸಮ್ಮುಖದಲ್ಲಿ ಪೊಲೀಸರಿಗೆ ಶರಣಾಗಿದ್ದು, ಇವರು ಗಾಲಿಕೊಂಡ, ಪನಸಲಬಂದ, ಆಕುಲೂರು ಮತ್ತು ರಾಮಗಡ್ಡ ಗ್ರಾಮಗಳಿಗೆ ಸೇರಿದವರು ಎನ್ನಲಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎಎಸ್‌ಪಿ ವಿದ್ಯಾ ಸಾಗರ್ ನಾಯ್ಡು ಅವರು, 'ಜನರನ್ನು ಮಾಹಿತಿದಾರರೆಂದು ಶಂಕಿಸುವುದು ಮತ್ತು ಊಹಾಪೋಹಗಳ ಆಧಾರದ ಮೇಲೆ ಜನರನ್ನು ಹತ್ಯೆ ಮಾಡುವ ಅನಾಗರಿಕ ಕೃತ್ಯಗಳಿಂದ ಇವರು ಬೇಸರಗೊಂಡಿದ್ದರು. ವೈಜಾಗ್‌ ಸುತ್ತಲಿನ ಅನೇಕ ಗ್ರಾಮಗಳಲ್ಲಿ ಮಾವೋವಾದಿಗಳ ಒತ್ತಡದ ಮೇರೆಗೆ ಅವರ ಪರ ಕೃತ್ಯಗಳಲ್ಲಿ ನಿರತರಾಗಿದ್ದೆವು ಎಂದು ಶರಣಾದವರು ಹೇಳಿದ್ದಾರೆ. ಜನರೂ ಸ್ವ ಇಚ್ಛೆಯಿಂದ ಮಾವೋವಾದಿಗಳ ಪರ ಕೆಲಸ ಮಾಡುತ್ತಿಲ್ಲ. ಕೊಲೆ ಬೆದರಿಕೆಗಳ ಪರಿಣಾಮ ಮಾವೋವಾದಿಗಳ ಪರ ಚಟುವಟಿಕೆಗಳನ್ನು ನಡೆಸುತ್ತಾರೆ. ಈ ಗ್ರಾಮಗಳು ಹಿಂದಿನಿಂದಲೂ ಮಾವೋವಾದಿಗಳ ಭದ್ರ ಕೋಟೆಯಾಗಿವೆ. ಹೀಗಾಗಿ, ಈ ಪ್ರದೇಶಗಳಿಂದಲೇ ನಕ್ಸಲರು ಶರಣಾಗಿರುವುದು ಚಿಂತಪಲ್ಲಿ ಉಪ ವಿಭಾಗದಲ್ಲಿ ಮಾವೋವಾದಿಗಳ ಬಲ ಕಡಿಮೆಯಾಗುತ್ತಿರುವುದರ ಸೂಚನೆಯಾಗಿದೆ ಎಂದು ನಾಯ್ಡು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?